ಈತನಮಲಾಷ್ಟಾಂಗಯೋಗ ವಿ
ಧೂತ ಕಿಲ್ಭಿಷನಾಗಿ ಬಳಿಕ ಮ
ಹಾತಪಸ್ವಿಗಳೊಳಗೆ ಸಂದನು ತೀವ್ರತೇಜದಲಿ
ಆ ತಪೋನಿಷ್ಟಂಗೆ ತಾವತಿ
ಭೀತಿ ಭಕ್ತಿಯೊಲಧಿಕ ಶುಶ್ರೂ
ಷಾತಿಶಯದಲಿ ಮನವಹಿಡಿದರು ಕುಂತಿಮಾದ್ರಿಯರು (ಆದಿ ಪರ್ವ, ೪ ಸಂಧಿ, ೨೪ ಪದ್ಯ)
ತಾತ್ಪರ್ಯ:
ಪಾಂಡುವು ದೋಷರಹಿತವಾದ ಅಷ್ಟಾಂಗ ಯೊಗದಿಂದ ತನ್ನ ಕಲ್ಮಷಗಳನ್ನು ಕಳೆದುಕೊಂಡು ಮಹಾತೇಜಸ್ವಿಯಾದನು. ತಪೋನಿರತನಾಗಿದ್ದ ಪಾಂಡುವಿಗೆ ಕುಂತಿ ಮಾದ್ರಿಯರು ಭಯ ಭಕ್ತಿಗಳಿಂದ ಶುಶ್ರೂಷೆ ಮಾಡುವುದರಲ್ಲೇ ತಮ್ಮ ಮನಸ್ಸನ್ನು ನಿಯೋಜಿಸಿದರು.
ಅರ್ಥ:
ಅಮಲ: ನಿರ್ಮಲ; ಅಷ್ಟಾಂಗ: ಎಂಟು ಅಂಗಗಳು; ವಿಧೂತ: ಅಲುಗಾಡುವ; ಕಿಲ್ಭಿಷ: ಪಾಪ; ಬಳಿಕ: ನಂತರ; ಮಹಾತಪಸ್ವಿ: ಶ್ರೇಷ್ಠ ಮುನಿವರ್ಯ; ಸಂದು: ಎಡೆ, ಸ್ಥಳ; ತೀವ್ರ: ಹರಿತ, ತೀಕ್ಷ್ಣತೆ; ತೇಜ: ಪ್ರಕಾಶ; ಭೀತಿ: ಭಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಅಧಿಕ: ಹೆಚ್ಚು; ಶುಶ್ರೂಷ: ಉಪಚಾರ, ಸೇವೆ; ಮನ: ಮನಸ್ಸು; ಹಿಡಿ: ಗ್ರಹಿಸು;
ಪದವಿಂಗಡಣೆ:
ಈತನ್+ಅಮಲ+ಅಷ್ಟಾಂಗಯೋಗ +ವಿ
ಧೂತ +ಕಿಲ್ಭಿಷನಾಗಿ +ಬಳಿಕ +ಮ
ಹಾ+ತಪಸ್ವಿಗಳೊಳಗೆ +ಸಂದನು +ತೀವ್ರ+ತೇಜದಲಿ
ಆ +ತಪೋನಿಷ್ಟಂಗೆ +ತಾವ್+ಅತಿ
ಭೀತಿ +ಭಕ್ತಿಯೊಳ್+ಅಧಿಕ +ಶುಶ್ರೂಷ
ಅತಿಶಯದಲಿ +ಮನವ+ಹಿಡಿದರು+ ಕುಂತಿ+ಮಾದ್ರಿಯರು
ಅಚ್ಚರಿ:
(೧) ಒಂದೇ ಪದವಾಗಿ ರಚನೆ: ಈತನಮಲಾಷ್ಟಾಂಗಯೋಗ