ಎವಗೆ ನೀವೇನಾತನೇನು
ತ್ಸವದೊಳಾಗಲಿಯೆನೆ ವಿರಾಟನ
ನವನಿಪತಿಮನ್ನಿಸಿದನಿತ್ತನು ನಗುತ ವೀಳೆಯವ
ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆ ಯೆಮ್ಮೈವರಸು ಯಾ
ದವ ಶಿರೋಮಣಿ ಕೃಷ್ಣನಭಿಮತ ನಮ್ಮ ಮತವೆಂದ (ವಿರಾಟ ಪರ್ವ, ೧೧ ಸಂಧಿ, ೨೭ ಪದ್ಯ)
ತಾತ್ಪರ್ಯ:
ನಮಗೆ ಅರ್ಜುನನಾದರೇನು, ಅಭಿಮನ್ಯುವಾದರೇನು, ಮದುವೆಯಾದರೆ ಒಳಿತು ಎಂದು ವಿರಾಟನು ಹೇಳಲು, ಧರ್ಮಜನು ಅವನಿಗೆ ವೀಳೆಯನ್ನು ಕೊಟ್ಟು, ನಮ್ಮ ಪರಮ ಸ್ವಾಮಿಯೂ, ನಮ್ಮೈವರ ಪ್ರಾನವೂ ಆದ ಯಾದವ ಕುಲಶ್ರೇಷ್ಠನಾದ ಕೃಷ್ಣನು ಹೇಳಿದಂತೆ ನಾವು ಕೇಳುತ್ತೇವೆ ಎಂದನು.
ಅರ್ಥ:
ಉತ್ಸವ: ಸಂಭ್ರಮ; ಅವನಿಪತಿ: ರಾಜ; ಮನ್ನಿಸು: ಗೌರವಿಸು; ನಗು: ಸಂತಸ; ವೀಳೆಯ: ತಾಂಬೂಲ; ಸ್ವಾಮಿ: ಒಡೆಯ; ನೆಲೆ: ಸ್ಥಾನ; ಶಿರೋಮಣಿ: ಶ್ರೇಷ್ಠ, ತಿಲಕಪ್ರಾಯ; ಅಭಿಮತ: ವಿಚಾರ; ಮತ: ಅಭಿಪ್ರಾಯ;
ಪದವಿಂಗಡಣೆ:
ಎವಗೆ +ನೀವೆನ್+ಆತನೇನ್
ಉತ್ಸವದೊಳಾಗಲಿ+ಎನೆ+ ವಿರಾಟನನ್
ಅವನಿಪತಿ+ಮನ್ನಿಸಿದನ್+ಇತ್ತನು +ನಗುತ+ ವೀಳೆಯವ
ಯೆವಗೆ+ ಪರಮಸ್ವಾಮಿ+ಎಮ್ಮು
ತ್ಸವದ +ನೆಲೆ +ಯೆಮ್ಮೈವರಸು+ ಯಾ
ದವ +ಶಿರೋಮಣಿ +ಕೃಷ್ಣನ್+ಅಭಿಮತ +ನಮ್ಮ +ಮತವೆಂದ
ಅಚ್ಚರಿ:
(೧) ಕೃಷ್ಣನ ಮೇಲಿನ ಗೌರವವನ್ನು ಸೂಚಿಸುವ ಪರಿ – ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆ ಯೆಮ್ಮೈವರಸು ಯಾದವ ಶಿರೋಮಣಿ ಕೃಷ್ಣನಭಿಮತ ನಮ್ಮ ಮತವೆಂದ