ಪದ್ಯ ೩೭: ಮಕ್ಕಳು ಕೂಪದ ದಡದಲ್ಲೇಕೆ ನಿಂತರು?

ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಥಿರನೃಪನ ಹರಳುಂ
ಗುರು ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನಿಂದ್ರನೆಂದನು ಬೇಗೆ ತೆಗೆಯೆಂದು (ಆದಿ ಪರ್ವ, ೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆ ಬಾಲಕರ ಗುಂಪಿನೊಡನೆ ಸೇರಿಕೊಂಡು ನೋಡುತ್ತಿರುವಾಗ ಯುಧಿಷ್ಠಿರನ ವಜ್ರದುಂಗುರವು ಬೆರಳಿನಿಂದ ಜಾರಿ ಆಳವಾದ ಗುಂಡಿಯಲ್ಲಿ ಬಿದ್ದಿತು. ನೂರಾರು ಹುಡುಗರು ಗುಂಡಿಯ ದಡದಲ್ಲಿ ನಿಂತು ಕೆಳಕ್ಕೆ ನೋಡಿ ಉಂಗುರವನ್ನು ಮೇಲಕ್ಕೆ ತರಲು ಸಾಧ್ಯವಿಲ್ಲವೆಂದು ಮಾತನಾದುತ್ತಿರಲು, ದ್ರೋಣನು ಅದನ್ನುಬ್ ಏಗೆ ತೆಗೆಯೆಂದು ತನ್ನ ಮಗ ಅಶ್ವತ್ಥಾಮನಿಗೆ ಹೇಳಿದನು.

ಅರ್ಥ:
ಬೆರಸು: ಕೂಡಿಸು; ನೆರವಿ: ಗುಂಪು, ಸಮೂಹ; ನೋಡು: ವೀಕ್ಷಿಸು; ನೃಪ: ರಾಜ; ಹರಳು: ಬೆಲೆಬಾಳುವ ರತ್ನ; ಉಂಗುರ: ಬೆರಳಿಗೆ ಹಾಕುವ ಆಭರನ; ವಿಘಾತ: ಕೇಡು, ಹಾನಿ, ಬಿಡುವುದು; ಬಿದ್ದು: ಜಾರು; ಅಗಾಧ: ದೊಡ್ಡ; ಕೂಪ: ಬಾವಿ; ನೆರೆ: ಸೇರು; ತಡಿ: ದಡ; ನಿಂದು: ನಿಲ್ಲು; ನೂರು: ಶತ; ನಿರೀಕ್ಷಿಸಿ: ಕಾಯುವುದು; ಸಾಧ್ಯ: ಮಾಡಬೇಕಾದ; ಮಗ: ಪುತ್ರ; ಮುನಿ: ಋಷಿ; ಬೇಗ: ಶೀಘ್ರ; ತೆಗೆ: ಹೊರತರು;

ಪದವಿಂಗಡಣೆ:
ಬೆರಸಿದನು +ನೆರವಿಯನು +ನೋಡು
ತ್ತಿರೆ+ ಯುಧಿಷ್ಠಿರ+ನೃಪನ +ಹರಳುಂ
ಗುರು +ವಿಘಾತಿಯೊಳುಗಿದು+ ಬಿದ್ದುದ್+ ಅಗಾಧ +ಕೂಪದಲಿ
ನೆರೆದು +ತಡಿಯಲಿ +ನಿಂದು +ನೂರ್+ಅರು
ವರು +ನಿರೀಕ್ಷಿಸಿ+ ಸಾಧ್ಯವಲ್ಲೆನು
ತಿರೆ +ಮಗಂಗೆ +ಮುನೀಂದ್ರನ್+ಎಂದನು +ಬೇಗೆ +ತೆಗೆಯೆಂದು

ಅಚ್ಚರಿ:
(೧) ನೂರರುವರು – ನೂರ ಆರು ಮಕ್ಕಳು ಎಂದು ಹೇಳಲು ಬಳಸಿದ ಪದ

ನಿಮ್ಮ ಟಿಪ್ಪಣಿ ಬರೆಯಿರಿ