ಬಕನ ಮಕ್ಕಳು ಜಟನ ಕಿಮ್ಮೀ
ರಕನ ಸುತರು ಹಿಡಿಂಬತನುಜರು
ವೃಕಜರಾಸಂಧಾತ್ಮಜರು ಶಿಶುಪಾಲನಂದನರು
ಸಕಲ ಸನ್ನಾಹದಲಿ ದೈತ್ಯ
ಪ್ರಕರ ಹೊಕ್ಕುದು ರಾಯ ರಥಪಾ
ಲಕರು ಕವಿದರು ತುಡುಕಿದರು ರಣವನು ಘಟೋತ್ಕಚನ (ದ್ರೋಣ ಪರ್ವ, ೧೫ ಸಂಧಿ, ೫೯ ಪದ್ಯ)
ತಾತ್ಪರ್ಯ:
ರಾಕ್ಷಸರಾದ ಬಕ, ಜಟ, ಕಿಮ್ಮೀರ, ಹಿಡಿಂಬ, ವೃಕ, ಜರಾಸಂಧ, ಶಿಶುಪಾಲಋಎ ಮೊದಲಾದವರು ಮಕ್ಕಳು, ಸಮಸ್ತ ಸನ್ನಾಹದಿಂದ ಯುದ್ಧಕ್ಕೆ ಬಮ್ದು ಘಟೋತ್ಕಚನೊಡನೆ ಕಾಳಗಕ್ಕೆ ಬಂದರು.
ಅರ್ಥ:
ಮಕ್ಕಳು: ಸುತರು; ಸುತ: ಮಕ್ಕಳು; ತನುಜ: ಮಗ; ಆತ್ಮಜ: ಮಕ್ಕಳು; ನಂದನ: ಮಕ್ಕಳು; ಸಕಲ: ಎಲ್ಲಾ; ಸನ್ನಾಹ: ಬಂಧನ; ದೈತ್ಯ: ರಾಕ್ಷಸ; ಪ್ರಕರ: ಗುಂಪು; ಹೊಕ್ಕು: ಸೇರು; ರಾಯ: ರಾಜ; ರಥ: ಬಂಡಿ; ಪಾಲಕ: ನೋಡಿಕೊಳ್ಳುವವ; ಕವಿ: ಆವರಿಸು; ತುಡುಕು: ಹೋರಾಡು, ಸೆಣಸು;
ಪದವಿಂಗಡಣೆ:
ಬಕನ +ಮಕ್ಕಳು +ಜಟನ +ಕಿಮ್ಮೀ
ರಕನ +ಸುತರು +ಹಿಡಿಂಬ+ತನುಜರು
ವೃಕ+ಜರಾಸಂಧ+ಆತ್ಮಜರು +ಶಿಶುಪಾಲ+ನಂದನರು
ಸಕಲ +ಸನ್ನಾಹದಲಿ +ದೈತ್ಯ
ಪ್ರಕರ +ಹೊಕ್ಕುದು +ರಾಯ +ರಥಪಾ
ಲಕರು +ಕವಿದರು +ತುಡುಕಿದರು +ರಣವನು +ಘಟೋತ್ಕಚನ
ಅಚ್ಚರಿ:
(೧) ಮಕ್ಕಳು, ಸುತರು, ತನುಜ, ಆತ್ಮಜ, ನಂದನ – ಸಮಾನಾರ್ಥಕ ಪದಗಳು