ರಾಯನೀಪರಿನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ (ಅರಣ್ಯ ಪರ್ವ, ೨೨ ಸಂಧಿ, ೬೩ ಪದ್ಯ)
ತಾತ್ಪರ್ಯ:
ಹೀಗೆ ಹೇಳಿ ದುರ್ಯೊಧನನು ಜನರನ್ನು ಹಿಂದಕ್ಕೆ ಕಳಿಸಿದನು. ನಂತರ ಭಗವಂತನ ಭಕ್ತಿಯನ್ನು ಬಯಸಿ ಸಮಾಧಿಯಲ್ಲಿದ್ದನು. ರಾತ್ರಿಯಾಯಿತು, ಆಗ ರಾಕ್ಷಸರು ಲೆಕ್ಕ ಹಾಕಿ ಇದೇ ಸಮಯವೆಂದು ಕೌರವನನ್ನು ರಸಾತಳಕ್ಕೆ ತೆಗೆದುಕೊಂಡು ಹೋಗಿ ಅವನಿಗೆ ಸಾಂಗವಗಿ ಸಾಮೋಪಾಯದಿಂದ ಹೀಗೆ ಹೇಳಿದರು.
ಅರ್ಥ:
ರಾಯ: ರಾಜ; ಪರಿ: ರೀತಿ; ನುಡಿ: ಮಾತು; ಜನ: ಗುಂಪು; ಸಮುದಾಯ: ಸಮೂಹ, ಗುಂಪು; ಕಳುಹಿ: ತೆರಳು; ಸುಮನ: ಒಳ್ಳೆಯ ಮನಸ್ಸು; ಉಭಯ: ಎರಡು; ಸಾಪೇಕ್ಷ: ಪೂರಕವಾದುದು; ಸಮಾಧಿ: ಏಕಾಗ್ರತೆ, ತನ್ಮಯತೆ; ರಾತ್ರಿ: ನಿಶಿ, ಇರುಳು; ದಾಯ:ಸಮಯ; ದೈತ್ಯ: ರಾಕ್ಷಸ; ನಿಕಾಯ: ಗುಂಪು; ಬಂದು: ಆಗಮಿಸು; ರಸಾತಳ: ಭೂಮಿಯ ಮೇಲ್ಭಾಗ;ಕೊಂಡೊಯ್ದು: ಕರೆದುಕೊಂಡು ಹೋಗು; ತಿಳುಹಿ: ಹೇಳು ಸಾಮ: ಸಮಾಧಾನ;
ಪದವಿಂಗಡಣೆ:
ರಾಯನ್+ಈ+ಪರಿನುಡಿದು+ ಜನ +ಸಮು
ದಾಯವನು+ ಕಳುಹಿದನು+ ಸುಮನೋ
ಭೂಯ +ಸಾಪೇಕ್ಷೆಯ +ಸಮಾಧಿಯೊಳಿರಲು+ ರಾತ್ರಿಯಲಿ
ದಾಯವಿದು+ ತಮಗೆಂದು+ ದೈತ್ಯ+ನಿ
ಕಾಯ +ಬಂದು +ರಸಾತಳಕೆ+ ಕುರು
ರಾಯನನು +ಕೊಂಡೊಯ್ದು +ತಿಳುಹಿದರವರು+ ಸಾಮದಲಿ
ಅಚ್ಚರಿ:
(೧) ರಾಯ, ದಾಯ, ಸಮುದಾಯ,ನಿಕಾಯ, ಭೂಯ – ಪ್ರಾಸ ಪದಗಳು