ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ (ಗದಾ ಪರ್ವ, ೧೧ ಸಂಧಿ, ೪೪ ಪದ್ಯ)
ತಾತ್ಪರ್ಯ:
ಧರ್ಮಜನು, ನಿಮ್ಮ ಮಕ್ಕಲಲ್ಲಿ ಎಂತಹ ಅವಗುಣ? ನಮ್ಮ ಅನೇಕ ಜನ್ಮಗಲ ಸಂಚಿತ ಕರ್ಮಫಲವೇ ಅವನಿಂದ ಇಂತಹದನ್ನು ಮಾಡಿಸಿತು. ರಾಜ್ಯ ಭ್ರಷ್ಟರಾದೆವು. ಅನೇಕ ಜನ್ಮಗಳ ಸಂಚಿತ ಸುಕೃತ ಫಲವೇ ನಮ್ಮನ್ನು ಗೆಲ್ಲಿಸಿತು ಎಂದು ಧರ್ಮಜನು ನುಡಿದನು.
ಅರ್ಥ:
ಅವಗುಣ: ದುರ್ಗುಣ, ದೋಷ; ಚಿರಂತನ: ಯಾವಾಗಲು; ಭವ: ಇರುವಿಕೆ, ಅಸ್ತಿತ್ವ; ಕಿಲ್ಭಿಷ: ಪಾಪ; ಕರ್ಮಪಾಕ: ಕರ್ಮಫಲ; ಪ್ರವರ: ಪೀಳಿಗೆ, ವಂಶ; ಸವ್ಯ: ದಕ್ಷಿಣ ಭಾಗ, ತೆಂಕಣ ದಿಕ್ಕು; ಮಾತ್ರ: ಸವ್ಯಪದೇಶ: ಕಪಟ, ಸಂಚಿಕೆ; ರಚಿಸು: ನಿರ್ಮಿಸು; ರಾಜ್ಯ: ರಾಷ್ಟ್ರ; ವಿಭ್ರಂಶ: ಕೆಳಕ್ಕೆ ಬೀಳುವುದು, ಪತನ; ಸುಕೃತ: ಒಳ್ಳೆಯ; ಉದಯ: ಹುಟ್ಟು; ಪ್ರಭಾವ: ಬಲ, ಪರಾಕ್ರಮ; ತಿರುಗು: ಸುತ್ತು; ನಯ: ನುಣುಪು, ಮೃದುತ್ವ; ಸುತ: ಮಗ; ನುಡಿ: ವಚನ;
ಪದವಿಂಗಡಣೆ:
ಅವರೊಳ್+ಅವಗುಣವೇ +ಚಿರಂತನ
ಭವದ +ಕಿಲ್ಬಿಷ +ಕರ್ಮಪಾಕ
ಪ್ರವರ +ದುರಿಯೋಧನನ +ಸವ್ಯಪದೇಶ+ಮಾತ್ರದಲಿ
ಎವಗೆ +ರಚಿಸಿತು +ರಾಜ್ಯ+ವಿಭ್ರಂ
ಶವನು +ತತ್+ಸುಕೃತೋದಯ+ಪ್ರಾ
ಭವವೆ+ ತಿರುಗಿಸಿತೆಂದು+ ನಯದಲಿ +ಧರ್ಮಸುತ +ನುಡಿದ
ಅಚ್ಚರಿ:
(೧) ದುರ್ಯೋಧನನ ಸ್ವಭಾವದ ಕಾರಣ – ಚಿರಂತನ ಭವದ ಕಿಲ್ಬಿಷ ಕರ್ಮಪಾಕ ಪ್ರವರ ದುರಿಯೋಧನನ ಸವ್ಯಪದೇಶ