ತೊಲಗಿ ನಿಂದರು ಮತ್ತೆ ಭಾರಿಯ
ಬಲಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಮ್ಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ (ಗದಾ ಪರ್ವ, ೭ ಸಂಧಿ, ೧೯ ಪದ್ಯ)
ತಾತ್ಪರ್ಯ:
ಇಬ್ಬರೂ ಹಿಂದಕ್ಕೆ ಸರಿದು ಕರ್ಪೂರ ವೀಳೆಯನ್ನು ಕೊಂಡು ಬಲಲಿಕೆಯನ್ನು ಕಳೆದುಕೊಂಡರು. ಮತ್ತೆ ಎದ್ದು ಇದಿರಾಗಿ ವಿರೋಧಿಯನ್ನು ಹೇಗೆ ಹೊಡೆಯಬೇಕೆಂದು ಆಲೋಚಿಸುತ್ತಾ ಎರಡು ಗದೆಗಳನ್ನು ತೂಗಿದರು.
ಅರ್ಥ:
ತೊಲಗು: ದೂರ ಸರಿ; ನಿಂದು: ನಿಲ್ಲು; ಭಾರಿ: ಭಾರವಾದುದು; ಬಳಲಿಕೆ: ಆಯಾಸ; ಬೇಳು: ಸುಟ್ಟುಹಾಕು, ನಾಶಪಡಿಸು; ಚಿತ್ತ: ಮನಸ್ಸು; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ರಂಗು: ಬಣ್ಣ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಘಳಿ: ನೆರಗೆ, ಮಡಿಸಿದ ಸೀರೆ; ಎದ್ದು: ಮೇಲೇಳು; ನಿಮಿಷ: ಕ್ಷಣ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ನಿಂದು: ನಿಲ್ಲು; ಘಾಯ: ಪೆಟ್ಟು; ಘಾತಿ: ಪೆಟ್ಟು; ಸುಳಿ: ಕಾಣಿಸಿಕೊಳ್ಳು; ಅವಧಾನ: ಸ್ಮರಣೆ, ಬುದ್ಧಿ; ತೂಗು: ಇಳಿಬಿಡು; ಆಯುಧ: ಶಸ್ತ್ರ; ಅದ್ವಯ: ಎರಡನೆಯದಿಲ್ಲದವನು;
ಪದವಿಂಗಡಣೆ:
ತೊಲಗಿ +ನಿಂದರು +ಮತ್ತೆ+ ಭಾರಿಯ
ಬಳಲಿಕೆಯ +ಬೇಳುವೆಯ +ಚಿತ್ತ
ಸ್ಖಲಿತರ್+ಅಂಗೀಕರಿಸಿದರು +ಕರ್ಪುರದ+ ವೀಳೆಯವ
ಘಳಿಲನೆದ್ದರು+ ನಿಮಿಷಮಾತ್ರಕೆ
ಮಲೆತು +ನಿಂದರು+ ಘಾಯಘಾತಿಯ
ಸುಳಿವನ್+ಅವಧಾನಿಸುತ +ತೂಗಿದರ್+ಆಯುಧ್+ಅದ್ವಯವ
ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಾರಿಯ ಬಲಲಿಕೆಯ ಬೇಳುವೆಯ