ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನೆಂಬೆನು ಜನಪ ಕೇಳೆಂದ (ಗದಾ ಪರ್ವ, ೯ ಸಂಧಿ, ೪೧ ಪದ್ಯ)
ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಏಳು ಅಕ್ಷೋಹಿಣೀ ಸೈನ್ಯದಲ್ಲಿ ಈಗ ಉಳಿದಿದ್ದ ಸೇನೆ ನಾಶವಾಯಿತು. ಬ್ರಾಹ್ಮಣರು, ಸೂತರು, ಮಾಗಧರು, ವಂದಿಗಳು ಮಾತ್ರ ಉಳಿದಿದ್ದರು. ಆಯುಧಧಾರಿಗಳೆಲ್ಲ ಹೋದ ಮೇಲೆ ಆನೆ ಕುದುರೆಗಳಿದ್ದೇನು ಪ್ರಯೋಜನ?
ಅರ್ಥ:
ಉಳಿದ: ಮಿಕ್ಕ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ನಾರಿ: ಸ್ತ್ರೀ; ನಿಕರ: ಗುಂಪು; ವಿಪ್ರ: ಬ್ರಾಹ್ಮಣ; ಆವಳಿ: ಗುಂಪು; ಕುಶೀಲ: ; ಸೂತ: ಸಾರಥಿ; ಮಾಗಧ: ಹೊಗಳುಭಟ್ಟ; ವಂದಿ: ಸ್ತುತಿಪಾಠಕ; ಸಂದೋಹ: ಗುಂಪು, ಸಮೂಹ; ಸುಳಿ: ಕಾಣಿಸಿಕೊಳ್ಳು; ಕಾಣು: ತೋರು; ಕೈದು: ಆಯುಧ; ಜೀವಿಸು: ಪ್ರಾಣವಿರುವ; ಆನೆ: ಗಜ; ಕುದುರೆ: ಅಶ್ವ; ಜವಿ: ಕೂದಲು, ಕೇಶ; ಜನಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಉಳಿದುದ್+ಏಳ್+ಅಕ್ಷೋಹಿಣೀ+ದಳ
ದೊಳಗೆ +ನಾರೀ+ನಿಕರ +ವಿಪ್ರಾ
ವಳಿ +ಕುಶೀಲವ +ಸೂತ +ಮಾಗಧ +ವಂದಿ+ಸಂದೋಹ
ಸುಳಿವ+ ಕಾಣೆನು +ಕೈದುವಿಡಿದರನ್
ಉಳಿದು +ಜೀವಿಸಿದ್+ಆನೆ +ಕುದುರೆಗಳ್
ಒಳಗೆ +ಜವಿಯಿಲ್ಲೇನನೆಂಬೆನು +ಜನಪ +ಕೇಳೆಂದ
ಅಚ್ಚರಿ:
(೧) ರೂಪಕದ ಪ್ರಯೋಗ – ಉಳಿದು ಜೀವಿಸಿದಾನೆ ಕುದುರೆಗಳೊಳಗೆ ಜವಿಯಿಲ್ಲೇನನೆಂಬೆನು