ಸುರನದಿಯನುತ್ತರಿಸಿ ಗೋದಾ
ವರಿಯ ಹೊರೆಗೈದಿದರು ತರಣಿಯ
ಕಿರಣಲಹರಿಯ ಹೊಯ್ಲಿನಲಿ ಶ್ರಮವಾಗೆ ಪರಿಹರಿಸಿ
ಮರುದಿವಸ ತೆರಳಿದರು ಮಲ್ಲರು
ನೆರೆದು ನಡೆದುದು ಬಂದು ಕೃಷ್ಣೆಯ
ವರನದಿಯ ತೀರದಲಿ ಬೀಡು ವಿನಾಥಪುರದಲ್ಲಿ (ವಿರಾಟ ಪರ್ವ, ೪ ಸಂಧಿ, ೧೩ ಪದ್ಯ)
ತಾತ್ಪರ್ಯ:
ಗಂಗಾ ಯಮುನಾ ನದಿಗಳನ್ನು ದಟಿ, ಬಿಸಿಲ ಬೇಗೆಯನ್ನು ಗೋದಾವರೀ ತೀರದಲ್ಲಿ ಪರಿಹರಿಸಿಕೊಂಡು, ಮರುದಿನ ಪ್ರ್ಯಾಣ ಬೆಳೆಸಿದರು. ಪ್ರಯಾಣ ಮಾಡುತ್ತಾ ಕೃಷ್ಣಾ ನದಿಯ ತೀರದ ವಿನಾಥಪುರದಲ್ಲಿ ಬೀಡು ಬಿಟ್ಟರು.
ಅರ್ಥ:
ಸುರನದಿ: ಗಂಘೆ; ಉತ್ತರಿಸು: ದಾಟಿಸು; ಐದು: ಬಂದುಸೇರು; ತರಣಿ: ಸೂರ್ಯ; ಕಿರಣ: ರಶ್ಮಿ; ಲಹರಿ: ಅಲೆ, ತೆರೆ; ಹೊಯ್ಲು: ಹೊಡೆತ; ಶ್ರಮ: ಕಷ್ಟ, ದಣಿವು; ಪರಿಹರಿಸು: ನಿವಾರಿಸು; ದಿವಸ: ದಿನ; ತೆರಳು: ಹೋಗು; ಮಲ್ಲ: ಜಟ್ಟಿ; ನೆರೆ: ಸೇರು; ನಡೆ: ಚಲಿಸು; ಬಂದು: ಆಗಮಿಸು; ವರನದಿ: ಶ್ರೇಷ್ಠ ಸರೋವರ; ತೀರ: ದಡ; ಬೀಡು: ಆವಾಸ, ನೆಲೆ; ಪುರ: ಊರು;
ಪದವಿಂಗಡಣೆ:
ಸುರನದಿಯನ್+ಉತ್ತರಿಸಿ +ಗೋದಾ
ವರಿಯ +ಹೊರೆಗೈದಿದರು +ತರಣಿಯ
ಕಿರಣ+ಲಹರಿಯ +ಹೊಯ್ಲಿನಲಿ +ಶ್ರಮವಾಗೆ +ಪರಿಹರಿಸಿ
ಮರುದಿವಸ +ತೆರಳಿದರು +ಮಲ್ಲರು
ನೆರೆದು +ನಡೆದುದು +ಬಂದು+ ಕೃಷ್ಣೆಯ
ವರನದಿಯ+ ತೀರದಲಿ +ಬೀಡು +ವಿನಾಥಪುರದಲ್ಲಿ
ಅಚ್ಚರಿ:
(೧) ದಕ್ಷಿಣಕ್ಕೆ ತೆರಳಿದರು ಎಂದು ಹೇಳಲು ನದಿಗಳ ಹೆಸರ ಬಳಕೆ – ಸುರನದಿ, ಗೋದಾವರಿ, ಕೃಷ್ಣೆ