ಪದ್ಯ ೩೯: ದ್ರೌಪದಿಯು ಕೃಷ್ಣನಿಗೆ ಏನು ಹೇಳಿದಳು?

ನಾವು ಹಸಿದೈತಂದರೀ ಪರಿ
ದೇವಿ ನಾನಾದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈಮುಗಿದು
ದೇವ ನಿಮ್ಮಯ ಹಸಿವ ಕಳೆವೊಡೆ
ಭಾವಶುದ್ಧಿಯ ಭಕುತಿ ಬೇಹುದು
ನಾವು ಚಂಚಲ ಚಿತ್ತರೆಂದಳು ಕಮಲಮುಖಿ ನಗುತ (ಅರಣ್ಯ ಪರ್ವ, ೧೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ನಾವು ಹಸಿದು ಬಂದಿದ್ದೇವೆ, ನೀನಾದರೋ ಏನೇನೋ ಸುದ್ದಿಯನ್ನು ಹೇಳುತ್ತಿರುವೆ. ಇದು ಉಚಿತವೇ ಎಂದು ಶ್ರೀಕೃಷ್ಣನು ಹೇಳಲು, ದ್ರೌಪದಿಯು ನಡುಗಿ, ಕೈಮುಗಿದು, ದೇವಾ, ನಿನ್ನ ಹಸಿವನ್ನು ಹೋಗಲಾಡಿಸಲು ಭಾವಶುದ್ಧಿಯ ಭಕ್ತಿ ಬೇಕು, ಆದರೆ ನಮ್ಮ ಚಿತ್ತಗಳು ಚಮ್ಚಲವಾಗಿವೆ ಎಂದು ನಗುತ್ತಾ ಹೇಳಿದಳು.

ಅರ್ಥ:
ಹಸಿವು: ಆಹಾರವನ್ನು ಬಯಸು; ಪರಿ: ವಿಧವಾಗಿ; ನಾನಾ: ಹಲವಾರು; ದೂರ: ಅಂತರ; ಉಚಿತ: ಸರಿಯಾದ; ನಡುಗು: ಕಂಪಿಸು; ಕೈಮುಗಿ: ನಮಸ್ಕರಿಸು; ದೇವ: ಭಗವಂತ; ಕಳೆ: ಅಂತ್ಯಗೊಳ್ಳು; ಭಾವ: ಮನೋಧರ್ಮ, ಭಾವನೆ; ಶುದ್ಧ: ನಿರ್ಮಲ; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬೇಹುದು: ಬೇಕು; ಚಂಚಲ: ಚೆಲ್ಲಾಟ; ಚಿತ್ತ: ಮನಸ್ಸು; ಕಮಲಮುಖಿ: ಕಮಲದಂತ ಮುಖವುಳ್ಳವಳು; ನಗು: ಸಂತಸ;

ಪದವಿಂಗಡಣೆ:
ನಾವು+ ಹಸಿದ್+ಐತಂದರ್+ಈ+ ಪರಿ
ದೇವಿ +ನಾನಾ+ದೂರ +ದೂರುವುದ್
ಆವುದ್+ಉಚಿತವು +ಹೇಳ್+ಎನಲು+ ನಡನಡುಗಿ +ಕೈಮುಗಿದು
ದೇವ +ನಿಮ್ಮಯ +ಹಸಿವ +ಕಳೆವೊಡೆ
ಭಾವಶುದ್ಧಿಯ +ಭಕುತಿ+ ಬೇಹುದು
ನಾವು +ಚಂಚಲ +ಚಿತ್ತರೆಂದಳು +ಕಮಲಮುಖಿ +ನಗುತ

ಅಚ್ಚರಿ:
(೧) ಕೃಷ್ಣನಿಗೆ ಹಸಿವು ನೀಗಿಸುವ ಪರಿ – ದೇವ ನಿಮ್ಮಯ ಹಸಿವ ಕಳೆವೊಡೆ ಭಾವಶುದ್ಧಿಯ ಭಕುತಿ ಬೇಹುದು

ನಿಮ್ಮ ಟಿಪ್ಪಣಿ ಬರೆಯಿರಿ