ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರ ಪರನೆ ವಿನೀತನನ್ಯಾ
ಚಾರಯುತನಾಚಾರಹೀನನು ಫಣಿಪ ಕೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೪ ಪದ್ಯ)
ತಾತ್ಪರ್ಯ:
ನಹುಷನು ಕೇಳಿದ ಪ್ರಶ್ನೆಗಳಿಗೆ ಯುಧಿಷ್ಠಿರನು ಉತ್ತರಿಸುತ್ತಾ, ಹೆಂಗಳ ಕಡೆಗಣ್ಣಿನ ನೋಟದ ಹೊಡೆತಕ್ಕೆ ಮನಸ್ಸಿನಲ್ಲಿ ಅಳುಕದವನೇ ಧೀರ, ಅವನೇ ಗಟ್ಟಿಗ, ನಾರಿಯರ ಮೋಹದಿಂದ ಉಬ್ಬಿ, ಶಿಷ್ಟರ ನಡತೆಯ ಮೇರೆಯನ್ನು ತಪ್ಪುವವನೇ ವಿಕಾರಿ, ವಿಚಾರವಮ್ತನೇ ವಿನೀತ, ಧರ್ಮಕ್ಕೆ ಸಮ್ಮತವಲ್ಲದ ಬೇರೆಯ ನಡತೆಯುಳ್ಳವನೇ ಆಚಾರಹೀನನೆಂದು ಯುಧಿಷ್ಠಿರ ನಹುಷನಿಗೆ ಹೇಳಿದನು.
ಅರ್ಥ:
ನಾರಿ: ಹೆಣ್ಣು; ಕಡೆಗಣ್ಣು: ಕುಡಿನೋಟ; ಹೊಯ್ಲು: ಹೊಡೆತ; ಧಾರೆ: ರಭಸ; ಅಳುಕು: ಹೆದರು; ಧೀರ: ಶೂರ; ದಿಟ್ಟ: ಗಟ್ಟಿಗ; ಅಬಲೆ: ಹೆಣ್ಣು; ಉಬ್ಬು: ಹಿಗ್ಗು; ಉಬ್ಬುಗವಳ: ದೊಡ್ಡ ತುತ್ತು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ವಿಕಾರಿ:ಮನಸ್ಸಿನ ವಿಕೃತಿ, ಕುರೂಪ; ವಿಚಾರ: ವಿಮರ್ಶೆ, ವಿವೇಕ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಅನ್ಯ: ಬೇರೆ; ಆಚಾರ: ಒಳ್ಳೆಯ ನಡತೆ; ಹೀನ: ಕೆಟ್ಟದು; ಫಣಿಪ: ಹಾವಿನ ಒಡೆಯ; ಕೇಳು: ಆಲಿಸು;
ಪದವಿಂಗಡಣೆ:
ನಾರಿಯರ +ಕಡೆಗಣ್ಣ +ಹೊಯ್ಲಿನ
ಧಾರೆಗ್+ಅಳುಕದನ್+ಆವನ್+ಆತನೆ
ಧೀರನ್+ಆತನೆ +ದಿಟ್ಟನ್+ಅಬಲೆಯರ್+ಉಬ್ಬುಗವಳದಲಿ
ಮೇರೆ+ತಪ್ಪುವನೇ +ವಿಕಾರಿ +ವಿ
ಚಾರ +ಪರನೆ +ವಿನೀತನ್+ಅನ್ಯ
ಆಚಾರಯುತನ್+ಆಚಾರಹೀನನು +ಫಣಿಪ +ಕೇಳೆಂದ
ಅಚ್ಚರಿ:
(೧) ಧೀರ, ದಿಟ್ಟನ ಗುಣಗಳು – ನಾರಿಯರ ಕಡೆಗಣ್ಣ ಹೊಯ್ಲಿನಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟ