ಪದ್ಯ ೫೧: ಭೀಮನು ಯಾವುದರಲ್ಲಿ ಬಂಧಿತನಾಗಿದ್ದನು?

ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿದೆನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯಿವು ರಾಯನಾಜ್ಞೆಯ
ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಹೆಂಡತಿಯ ಮಾತು ಕೇಳಿ ಭೀಮನು ಅಣ್ಣನಾಜ್ಞೆಯನ್ನು ಮೀರಿದ ಎಂದು ಕುಜನರು ನಾಳೆ ಮಾತನಾದುತ್ತಾರೆ, ಅಣ್ಣನ ಬಳಿಗೆ ಹೋಗಿ ದೂರು ಕೊಡು, ಇದು ನಾವು ನುಂಗಲಾಗದ ಕೆಂಡ. ಅಣ್ಣನಾಜ್ಞೆಯೆಂಬ ಹಗ್ಗವು ನನ್ನ ಕಾಲನ್ನು ಕಟ್ಟಿಹಾಕಿದ್ದು ನಾನದರಲ್ಲಿ ಬಿದ್ದಿದ್ದೇನೆ ಎಂದು ಭೀಮನು ಹೇಳಿದನು.

ಅರ್ಥ:
ಹೆಣ್ಣು: ಸ್ತ್ರೀ; ಹರಿಬ: ಕೆಲಸ, ಕಾರ್ಯ; ಆಜ್ಞೆ: ಅಪ್ಪಣೆ; ಮೀರು: ದಾಟು; ಅಣ್ಣ: ಹಿರಿಯ ಸಹೋದರ; ದೂರು: ಮೊರೆ, ಅಹವಾಲು; ಉರಿ: ಜ್ವಾಲೆ, ಸಂಕಟ; ಉಣ್ಣು: ಊಟಮಾದು; ರಾಯ: ರಾಜ; ಕಣ್ಣಿ: ಹಗ್ಗ, ರಜ್ಜು; ಬಿಗಿ: ಬಂಧಿಸು; ಕೆಡೆ: ಬೀಳು, ಕುಸಿ; ಕಾಂತೆ: ಪ್ರಿಯತಮೆ; ಕೇಳು: ಆಲಿಸು; ಚಿಣ್ಣ: ಎಳೆಯವನು;

ಪದವಿಂಗಡಣೆ:
ಹೆಣ್ಣ +ಹರಿಬಕ್ಕೋಸುಗವೆ+ ತ
ಮ್ಮಣ್ಣನ್+ಆಜ್ಞೆಯ +ಮೀರಿ +ಕುಂತಿಯ
ಚಿಣ್ಣ+ ಬದುಕಿದೆನೆಂದು +ನುಡಿವರು+ ಕುಜನರಾದವರು
ಅಣ್ಣನವರಿಗೆ+ ದೂರುವುದು +ನಾ
ವುಣ್ಣದ್+ಉರಿಯಿವು +ರಾಯನಾಜ್ಞೆಯ
ಕಣ್ಣಿಯಲಿ +ಬಿಗಿವಡೆದು+ ಕೆಡೆದೆವು +ಕಾಂತೆ +ಕೇಳೆಂದ

ಅಚ್ಚರಿ:
(೧) ಕುಜನರ ಮಾತು – ಹೆಣ್ಣ ಹರಿಬಕ್ಕೋಸುಗವೆ ತಮ್ಮಣ್ಣನಾಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದ