ಪದ್ಯ ೪೬: ಶಲ್ಯನು ಧರ್ಮಜನಿಗೆ ಏನು ಹೇಳಿದ?

ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ (ಶಲ್ಯ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜ, ನಿನ್ನ ಚತುರಂಗ ಬಲವು ಮುರಿದು ಹೋಯಿತು. ಇನ್ನು ನಿನ್ನ ಇರಿತದ ಚಾತುರ್ಯವೆಲ್ಲಿದೆ ತೋರಿಸು? ಭೀಮಾರ್ಜುನರ ಬಿಂಕ ಹಾರಿಹೋಯಿತು. ವೀರರೆಂಬ ಮದವನ್ನು ಬಿಟ್ಟು ಬಿಡು. ಸಹದೇವ ನಕುಲರು ನನ್ನ ಸೋದರವಾಮತ

ಅರ್ಥ:
ಮುರಿ: ಸೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಇರಿತ: ತಿವಿ, ಚುಚ್ಚು; ಸುತ: ಮಗ; ಕೈ: ಹಸ್ತ; ಮರೆ: ನೆನಪಿನಿಂದ ದೂರ ಸರಿ; ಕಲಿ: ಶೂರ; ಬಿಂಕ: ಗರ್ವ, ಜಂಬ; ಬೀತುದು: ಮುಗಿಯಿತು, ಕ್ಷಯವಾಯಿತು; ಮೆರೆ: ಹೊಳೆ; ಮದ: ಗರ್ವ; ಮಾವ: ತಾಯಿಯ ತಮ್ಮ; ಹೊರಗೆ: ಆಚೆ; ಅರಿ: ತಿಳಿ; ಹೊಕ್ಕು: ಸೇರು; ಪರಬಲ: ವೈರಿ ಸೈನ್ಯ;

ಪದವಿಂಗಡಣೆ:
ಮುರಿದುದೈ+ ಚತುರಂಗ+ಬಲ +ನಿನ್
ಇರಿತವಾವೆಡೆ+ ಧರ್ಮಸುತ +ಕೈ
ಮರೆದಲಾ +ಕಲಿ+ಭೀಮ+ಪಾರ್ಥರ +ಬಿಂಕ +ಬೀತುದಲಾ
ಮೆರೆಯಿ +ಮದವನು +ಮಾವತನವದು
ಹೊರಗಿರಲಿ +ಸಹದೇವ +ನಕುಲರನ್
ಅರಿಯಬಹುದಿನ್ನೆನುತ +ಹೊಕ್ಕನು +ಶಲ್ಯ +ಪರಬಲವ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೆರೆಯಿ ಮದವನು ಮಾವತನವದು