ಪದ್ಯ ೭೩: ಮಾತಲಿಯು ಅರ್ಜುನನಿಗೆ ಏನು ವಿವರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ, ಇಂದ್ರನ ಸಾರಥಿಯಾದ ಮಾತಲಿಯು ಅರ್ಜುನನಿಗೆ ಭೂಮಿ, ವಿಶ್ವಕೋಶ, ಪರ್ವತಗಳು, ಸಮುದ್ರಗಳು ಎಲ್ಲವನ್ನೂ ವಿವರಿಸಿದನು. ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮಾನವರ ಭೂಮಿ, ಇನ್ನು ಇತ್ತ ಸ್ವರ್ಗವನ್ನು ನೋಡು ಎಂದು ತೋರಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಇಂದ್ರ: ಶಕ್ರ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಿತ್ರಿ; ಭುವನ: ಜಗತ್ತು, ಪ್ರಪಂಚ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಲಧಿ: ಸಾಗರ; ಕುಲಾದ್ರಿ: ಬೆಟ್ಟ; ಪಯೋಧಿ: ಸಾಗರ; ಮಹಾ: ದೊಡ್ಡ; ದ್ವೀಪ: ನೀರಿನಿಂದ ಆವರಿಸಿರುವ ಭೂಮಿ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಅರ್ಜುನಗೆ +ಭೂಮಿಯ
ಭುವನಕೋಶದ +ಸನ್ನಿವೇಶವನ್+ಅದ್ರಿ +ಜಲಧಿಗಳ
ಇವು +ಕುಲಾದ್ರಿಗಳ್+ಇವು +ಪಯೋಧಿಗಳ್
ಇವು +ಮಹಾ+ದ್ವೀಪಂಗಳ್+ಇವು+ ಮಾ
ನವರ +ಧರಣೀ +ಸ್ವರ್ಗ +ಮೇಲಿನ್ನಿತ್ತ +ನೋಡೆಂದ

ಅಚ್ಚರಿ:
(೧) ಭೂಮಿ, ಧರಣೀ, ಅವನಿ; ಜಲಧಿ, ಪಯೋಧಿ – ಸಮನಾರ್ಥಕ ಪದಗಳು

ಪದ್ಯ ೨೨: ಮಾಲತಿಯು ಅರ್ಜುನನಿಗೆ ಏನನ್ನು ತೋರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನಾತಂಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿಜಾಲಗಳ
ಇವು ಕುಲಾದ್ರಿಗಳಿವು ಪಯೋನಿಧಿ
ಯಿವು ಮಹಾದ್ವೀಪಂಗಳಿವು ಮಾ
ನವರ ಧರಣಿ ಸ್ವರ್ಗವಿಲ್ಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಮಾಲತಿಯು ಅರ್ಜುನನಂಗೆ ಭೂಮಿಯನ್ನೂ ವಿಶ್ವದಲ್ಲಿ ಅದರ ಸನ್ನಿವೇಶವನ್ನು ವಿವರಿಸಿದನು. ಎಲೈ ಅರ್ಜುನ ನೋಡು ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮನುಷ್ಯರಿರುವ ಭೂಮಿ, ಈ ಕಡೆಯಿರುವುದೇ ಸ್ವರ್ಗ ಎಂದನು.

ಅರ್ಥ:
ಅವನಿಪತಿ: ರಾಜ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಣಿ; ಭುವನ: ಜಗತ್ತು, ಪ್ರಪಂಚ; ಕೋಶ: ಭಂಡಾರ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಾಲ: ಸಮೂಹ; ಕುಲಾದ್ರಿ: ಕುಲಪರ್ವತ; ಪಯೋನಿಧಿ: ಸಮುದ್ರ; ಮಹಾದ್ವೀಪ: ದೊಡ್ಡಭೂಭಾಗ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಆತಂಗೆ +ಭೂಮಿಯ
ಭುವನ +ಕೋಶದ +ಸನ್ನಿವೇಶವನ್+ಅದ್ರಿಜಾಲಗಳ
ಇವು ಕುಲಾದ್ರಿಗಳಿವು+ ಪಯೋನಿಧಿ
ಯಿವು +ಮಹಾದ್ವೀಪಂಗಳಿವು+ ಮಾ
ನವರ +ಧರಣಿ +ಸ್ವರ್ಗವಿಲ್ಲಿನ್ನಿತ್ತ+ ನೋಡೆಂದ

ಅಚ್ಚರಿ:
(೧) ಅವನಿ, ಧರಣಿ – ಸಮನಾರ್ಥಕ ಪದ