ಕದನವಾರಲಿ ಪಾಂಡುಸುತರಲಿ
ಕದನವಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೪೬ ಪದ್ಯ)
ತಾತ್ಪರ್ಯ:
ಯುದ್ಧದಲ್ಲಿ ಸಾಯುವುದು ಧರ್ಮವೆಂದಿರಿ, ಭಾರತ ವರ್ಷದಲ್ಲಿ ಪಾಂಡವರನ್ನು ಬಿಟ್ಟು ನಮಗೆ ವಿರೋಧಿಗಳಾರು? ಈಗ ಅವರು ನಮ್ಮನ್ನು ಗಂಧರ್ವರಿಂದ ಬಿಡುಗಡೆಗೊಳ್ಳಿಸಿರುವುದರಿಂದ ಅವರೊಡನೆ ಯುದ್ಧಮಾಡುವುದು ಉಚಿತವೇ? ಇದನ್ನು ತಿಳಿದೇ ನಾನು ಸಂಕಲ್ಪ ಭಂಗಮಾಡಲಾರೆ, ತಾವು ತಮ್ಮ ಮನೆಗಳಿಗೆ ಹಿಂದಿರುಗಿ ನನ್ನ ಮೇಲೆ ಕರುಣೆ ತೋರಿಸಬೇಡಿ ಎಂದು ಬೇಡಿದನು.
ಅರ್ಥ:
ಕದನ: ಯುದ್ಧ; ಸುತ: ಮಕ್ಕಳು; ಉಚಿತ: ಸರಿ; ಇದಿರು: ಎದುರು; ಬಳಿಕ: ನಂತರ; ವರುಷ: ಪ್ರದೇಶ; ಸೀಮೆ: ಎಲ್ಲೆ, ಗಡಿ; ಸಂಕಲ್ಪ: ನಿಶ್ಚಯ; ಭಂಗ: ಮುರಿಯುವಿಕೆ; ಆಸ್ಪದ: ಪ್ರತಿಷ್ಠೆ; ಸದನ: ಆಲಯ; ಅಭಿಮುಖ: ಎದುರು; ಕರುಣೆ: ದಯೆ; ಭೂಪ: ರಾಜ;
ಪದವಿಂಗಡಣೆ:
ಕದನವ್+ಆರಲಿ +ಪಾಂಡು+ಸುತರಲಿ
ಕದನವಾಡುವುದ್+ಉಚಿತವೇ +ನಮಗ್
ಇದಿರು +ಬಳಿಕಾರುಂಟು +ಭಾರತ+ ವರುಷ+ ಸೀಮೆಯಲಿ
ಇದನರಿತು +ಸಂಕಲ್ಪ +ಭಂಗ
ಆಸ್ಪದವ +ಮಾಡುವುದ್+ಒಳ್ಳಿತೇ +ನಿಜ
ಸದನಕ್+ಅಭಿಮುಖರಾಗಿ+ ಕರುಣಿಪುದೆಂದನಾ +ಭೂಪ
ಅಚ್ಚರಿ:
(೧) ಹಿಂದಿರುಗಿ ಎಂದು ಹೇಳುವ ಪರಿ – ನಿಜಸದನಕಭಿಮುಖರಾಗಿ