ಪದ್ಯ ೧೪: ಧರ್ಮಜನು ಮತ್ತಾರ ಆಶ್ರಮಕ್ಕೆ ಹೋದನು?

ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥ ಸೇವಾ
ಪರಮ ಪಾವನ ಕರಣನಿರ್ದನು ಪರ್ಣಶಾಲೆಯಲಿ (ಅರಣ್ಯ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಕಾರ್ತಿಕೇಯನ ಆಶ್ರಮಕ್ಕೆ ಹೋಗಿ ಮುನಿಗಳೊಡನೆ ಒಂದು ವರ್ಷಕಾಲ ಸಂತೋಷದಿಂದಿದ್ದನು. ಅಲ್ಲಿಂದ ಮುಂದೆ ಬೃಹದಶ್ವನ ಆಶ್ರಮಕ್ಕೆ ಹೋಗಿ ಪರ್ಣಶಾಲೆಯಲ್ಲಿದ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರ: ಶ್ರೇಷ್ಠ; ಮಹಾ: ದೊಡ್ಡ, ಶ್ರೇಷ್ಠ; ಆಶ್ರಮ: ಕುಟೀರ; ಮುನಿ: ಋಷಿ; ಸಹಿತ: ಜೊತೆ; ಒಲವು: ಪ್ರೀತಿ; ನೂಕು: ತಳ್ಳು; ವತ್ಸರ: ವರ್ಷ; ಧರಣಿಪತಿ: ರಾಜ; ಬಂದನು: ಆಗಮಿಸು; ತೀರ್ಥ: ಪುಣ್ಯಕ್ಷೇತ್ರ; ಸೇವೆ: ಉಪಚಾರ, ಶುಶ್ರೂಷೆ, ಪೂಜೆ; ಪರಮ: ಶ್ರೇಷ್ಠ; ಪಾವನ: ಪವಿತ್ರವಾದ; ಪರ್ಣಶಾಲೆ: ಕುಟೀರ; ಐದು: ಬಂದುಸೇರು;

ಪದವಿಂಗಡಣೆ:
ಅರಸ+ ಕೇಳೈ +ಕಾರ್ತಿಕೇಯನ
ವರ +ಮಹಾಶ್ರಮಕ್+ಐದಿದನು +ಮುನಿ
ವರರು +ಸಹಿತ್+ಒಲವಿನಲಿ +ನೂಕಿದನ್+ಒಂದು +ವತ್ಸರವ
ಧರಣಿಪತಿ +ಬೃಹದಶ್ವನ್+ಆಶ್ರಮ
ವರಕೆ+ ಬಂದನು +ತೀರ್ಥ +ಸೇವಾ
ಪರಮ +ಪಾವನ +ಕರಣನಿರ್ದನು +ಪರ್ಣಶಾಲೆಯಲಿ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಸೇವಾ ಪರಮ ಪಾವನ ಕರಣ
(೨) ಅರಸ, ಧರಣಿಪತಿ – ಸಮನಾರ್ಥಕ ಪದ

ಪದ್ಯ ೫: ಧರ್ಮಜನು ಯಾರೊಂದಿಗೆ ತನ್ನ ದುಃಖದ ಸಂಗತಿಯನ್ನು ಹೇಳಿಕೊಂಡನು?

ವರಪುಲಸ್ತ್ಯ ಮುನೀಂದ್ರ ಭೀಷ್ಮಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲಂಗೆ
ಧರಣಿಪತಿ ಬೃಹದಶ್ವನನು ಸ
ತ್ಕರಿಸಿ ನಿಜರಾಜ್ಯಾಪಹಾರದ
ಪರಮ ದುಃಖ ಪರಂಪರೆಯನರುಹಿದನು ಖೇದದಲಿ (ಅರಣ್ಯ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಪುಲಸ್ತ್ಯ ಮುನಿಗಳು ಭೀಷ್ಮನಿಗೆ ತಿಳಿಸಿದ ಪುಷ್ಕರಾದಿ ತೀರ್ಥಗಳ ಮಹಿಮೆಯನ್ನು ಲೋಮಶನು ಧರ್ಮಜನಿಗೆ ತಿಳಿಸಿದನು. ಆಗ ಬೃಹದಶ್ವನೆಂಬ ಮಹರ್ಷಿಯು ಬರಲು ಧರ್ಮರಾಜನು ಅವನ್ನ್

ಅರ್ಥ:
ವರ: ಶ್ರೇಷ್ಠ; ಮುನೀಂದ್ರ: ಋಷಿವರ್ಯ; ಅರುಹು: ತಿಳಿಸು; ಉತ್ತಮ: ಶ್ರೇಷ್ಠ; ತೀರ್ಥ: ಪುಣ್ಯಕ್ಷೇತ್ರ; ವಿಸ್ತರ: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಮುನಿ: ಋಷಿ; ಅವನಿ: ಭೂಮಿ; ಅವನಿಪಾಲ: ರಾಜ; ಧರಣಿಪತಿ: ರಾಜ; ಸತ್ಕರಿಸು: ಗೌರವಿಸು; ರಾಜ್ಯ: ರಾಷ್ಟ್ರ,ದೇಶ; ಅಪಹಾರ: ಕಿತ್ತುಕೊಳ್ಳುವುದು; ಪರಮ: ಶ್ರೇಷ್ಠ; ದುಃಖ: ನೋವು, ದುಗುಡ; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು; ಖೇದ: ದುಃಖ;

ಪದವಿಂಗಡಣೆ:
ವರಪುಲಸ್ತ್ಯ +ಮುನೀಂದ್ರ +ಭೀಷ್ಮಂಗ್
ಅರುಹಿದ್+ಉತ್ತಮ +ತೀರ್ಥವನು+ ವಿ
ಸ್ತರಿಸಿದನು +ಲೋಮಶ +ಮುನೀಶ್ವರನ್+ಅವನಿಪಾಲಂಗೆ
ಧರಣಿಪತಿ +ಬೃಹದಶ್ವನನು +ಸ
ತ್ಕರಿಸಿ +ನಿಜ+ರಾಜ್ಯ+ಅಪಹಾರದ
ಪರಮ +ದುಃಖ +ಪರಂಪರೆಯನ್+ಅರುಹಿದನು +ಖೇದದಲಿ

ಅಚ್ಚರಿ:
(೧) ದುಃಖ, ಖೇದ; ವರ, ಉತ್ತಮ, ಪರಮ; ಮುನೀಂದ್ರ, ಮುನೀಶ್ವರ; ಧರಣಿಪತಿ, ಅವನಿಪಾಲ – ಸಮನಾರ್ಥಕ ಪದಗಳು