ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ
ಜನಪ ಧೃತರಾಷ್ಟ್ರಾದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದರೂರ್ಧ್ವ ದೈಹಿಕವಾಯ್ತು ಮಗುಳಲ್ಲಿ (ಆದಿ ಪರ್ವ, ೫ ಸಂಧಿ, ೨೯ ಪದ್ಯ)
ತಾತ್ಪರ್ಯ:
ಮುನಿಗಳು ತಕ್ಷನವೇ ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ಪಾಂಡುವಿನ ವೃತ್ತಾಂತವು ಜನಜನಿತವಾಗಿ ದುಃಖ ಸಮುದ್ರವೇ ತುಂಬಿ ಹರಿಯಿತು. ಧೃತರಾಷ್ಟ್ರನೇ ಮೊದಲಾದ ಬಾಂಧವರು ಮತ್ತೆ ಪಾಂಡುವಿನ ಅಂತ್ಯಕ್ರಿಯೆಗಳನ್ನೂ ಅಪರ ಕ್ರಿಯೆಗಳನ್ನು ಮಾಡಿದರು.
ಅರ್ಥ:
ಮುನಿ: ಋಷಿ; ಕ್ಷಣ: ಸಮಯ; ಮರಳು: ಹಿಂದಿರುಗು; ಜನಪ: ರಾಜ; ವೃತ್ತಾಂತ: ಸಮಾಚಾರ; ವಿವರಿಸು: ವಿಸ್ತಾರವಾಗಿ ಹೇಳು; ಜನಜನಿತ: ಪ್ರಚಲಿತವಾದ; ಬಳಿಕ: ನಂತರ; ಉಬ್ಬು: ಹೆಚ್ಚಾಗು; ಹರಿ: ಹರಡು; ಶೋಕ: ದುಃಖ; ರಸ: ಸಾರ; ಜಲಧಿ: ಸಾಗರ; ಬಾಂಧವ: ನಂಟ, ಸಂಬಂಧಿಕ; ಜನ: ಮನುಷ್ಯ; ಪುನಃ: ಮತ್ತೆ; ಸಂಸ್ಕಾರ: ಪರಿಷ್ಕರಣ; ಭೂಪ: ರಾಜ; ದಹಿಸು: ಸುಡು; ಊರ್ಧ್ವ: ಅಂತ್ಯಕ್ರಿಯೆ; ದೈಹಿಕ: ಶರೀರಕ್ಕೆ ಸಂಬಂಧಿಸಿದ; ಮಗುಳು: ಹಿಂತಿರುಗು, ಪುನಃ;
ಪದವಿಂಗಡಣೆ:
ಮುನಿಗಳ್+ಆ+ಕ್ಷಣ+ ಮರಳಿದರು +ತ
ಜ್ಜನಪ+ ವೃತ್ತಾಂತವನು +ವಿವರಿಸೆ
ಜನಜನಿತ+ ಬಳಿಕುಬ್ಬಿ+ ಹರಿದುದು +ಶೋಕರಸ +ಜಲಧಿ
ಜನಪ +ಧೃತರಾಷ್ಟ್ರಾದಿ +ಬಾಂಧವ
ಜನ +ಪುನಃ +ಸಂಸ್ಕಾರದಲಿ +ಭೂ
ಪನನು +ದಹಿಸಿದರ್+ಊರ್ಧ್ವ+ ದೈಹಿಕವಾಯ್ತು +ಮಗುಳಲ್ಲಿ
ಅಚ್ಚರಿ:
(೧) ಜನಪ – ೨, ೪ ಸಾಲಿನ ಮೊದಲ ಪದ
(೨) ಜನ, ಜನಜನಿತ, ಜನಪ – ಪದಗಳ ಬಳಕೆ