ದರುಶನವನೊಲಿದಿತ್ತು ವಸುದೇ
ವರನು ದೇವಕಿ ದೇವಿಯರ ಸಂ
ಕರುಷಣನನು ಮಹದುಗ್ರಸೇನನ ಕಂಡನವನೀಶ
ವರಸುಭದ್ರಾದೇವಿ ಭಾವಂ
ದಿರಿಗೆ ವಂದಿಸಿದಳು ಕುಮಾರನು
ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ (ವಿರಾಟ ಪರ್ವ, ೧೧ ಸಂಧಿ, ೫೯ ಪದ್ಯ)
ತಾತ್ಪರ್ಯ:
ಯುಧಿಷ್ಠಿರನು ವಸುದೇವ, ದೇವಕಿ, ಬಲರಾಮ, ಉಗ್ರಸೇನರನ್ನು ಕಂಡು ವಂದಿಸಿದನು. ಸುಭದ್ರೆಯು ಭಾವಂದಿರಿಗೆ ನಮಸ್ಕರಿಸಿದಳು. ಅಭಿಮನ್ಯುವು ಮ್ಪಾಂಡವರನ್ನು ಹರ್ಷದಿಂದ ಆಲಿಂಗಿಸಿದಳು.
ಅರ್ಥ:
ದರುಶನ: ನೋಟ; ಒಲಿ: ಪ್ರೀತಿ; ಸಂಕರುಷಣ: ವಿಷ್ಣು; ಅವನೀಶ: ರಾಜ; ಕಂಡು: ನೋಡು; ವರ: ಶ್ರೇಷ್ಠ; ಭಾವ: ತಂಗಿಯ ಗಂಡ; ವಂದಿಸು: ನಮಸ್ಕರಿಸು; ಕುಮಾರ: ಮಕ್ಕಳು; ಹರುಷ: ಸಂತಸ; ಬಿಗಿ: ಗಟ್ಟಿಯಾಗಿ; ಅಪ್ಪು: ಆಲಂಗಿಸು;
ಪದವಿಂಗಡಣೆ:
ದರುಶನವನ್+ಒಲಿದಿತ್ತು+ ವಸುದೇ
ವರನು +ದೇವಕಿ +ದೇವಿಯರ +ಸಂ
ಕರುಷಣನನು +ಮಹದುಗ್ರಸೇನನ +ಕಂಡನ್+ಅವನೀಶ
ವರ+ಸುಭದ್ರಾದೇವಿ+ ಭಾವಂ
ದಿರಿಗೆ+ ವಂದಿಸಿದಳು+ ಕುಮಾರನು
ಹರುಷದಲಿ+ ಬಿಗಿಯಪ್ಪಿದನು +ಅಭಿಮನ್ಯು +ಪಾಂಡವರ
ಅಚ್ಚರಿ:
(೧) ವಸುದೇವ, ದೇವಕಿ, ಸಂಕರುಷಣ, ಉಗ್ರಸೇನ, ಸುಭದ್ರಾ, ಅಭಿಮನ್ಯು – ಹೆಸರುಗಳನ್ನು ಪ್ರಸ್ತಾಪಿಸಿರುವುದು