ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರತಿಹೆಯೆಂದನಾ ಭೂಪ (ಗದಾ ಪರ್ವ, ೬ ಸಂಧಿ, ೧೮ ಪದ್ಯ)
ತಾತ್ಪರ್ಯ:
ಕೌರವನು ಭೀಮನಿಗೆ ಉತ್ತರಿಸುತ್ತಾ, ಎಲೈ ಭೀಮ, ವೀರರು ಸಾಯಬಾರದೇ? ಜೀವನವು ಸೂರ್ಯ ಚಂದ್ರರಿರುವವರೆಗೂ ಇದ್ದೀತೇ? ಆಯುಷ್ಯ ತೀರಿದರೆ ಸಾಯುತ್ತಾರೆ. ವಿಧಿಯು ಒಬ್ಬನ ಆಯುಷ್ಯವಿಷ್ಟೇ ಎಂದು ಟಿಪ್ಪಣಿ ಬರೆಯುತ್ತದೆ. ಸಾಯುವವರನ್ನು ನೀನು ಉಳಿಸಬಲ್ಲೆಯಾ? ದೈವೇಚ್ಛೆಯಂತೆ ಎಲ್ಲವೂ ನಡೆಯುತ್ತದ, ನಾನು ಮಾಡಿದೆನೆಂಬ ಅಹಂಕಾರವೇಕೆ ಎಂದು ಹೇಳಿದನು.
ಅರ್ಥ:
ಸಾಯಲು: ಮರಣ ಹೊಂದಲು; ಸುಭಟ: ವೀರ; ಆಚಂದ್ರಾಯತ: ಸೂರ್ಯ ಚಂದ್ರರಿರುವ ವರೆಗೂ; ತನು: ದೇಹ; ವಿಧಿ: ನಿಯಮ; ಟಿಪ್ಪಣಿ: ಬರಹ; ಆಯುಷ್ಯ: ಜೀವಿತಾವಧಿ; ತೀರು: ಮುಗಿದುದು; ಸಾವು: ಮರನ; ಕಾಯಲು: ರಕ್ಷಿಸು; ಅಳವು: ಅಲ್ಲಾಡು; ಮುನಿ: ಕೋಪ; ನೋವು: ಪೆಟ್ಟು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದೈವ: ಭಗವಮ್ತ; ಬೆರತಿ
ಪದವಿಂಗಡಣೆ:
ಸಾಯಲಾಗದೆ +ಸುಭಟರ್+ಆಚಂ
ದ್ರಾಯತವೆ +ತನು +ವಿಧಿಯ +ಟಿಪ್ಪಣದ್
ಆಯುಷವು +ತೀರಿದಡೆ +ಸಾವರು +ನಿನ್ನಲೇನಹುದು
ಕಾಯಲ್+ಅಳವೇ +ನಿನಗೆ +ಮುನಿದಡೆ
ನೋಯಿಸುವಡ್+ಅಳವಲ್ಲ +ಫಡ+ ದೈ
ವಾಯತಕೆ+ ನೀನೇಕೆ +ಬೆರತಿಹೆ+ಎಂದನಾ +ಭೂಪ
ಅಚ್ಚರಿ:
(೧) ಲೋಕ ನೀತಿ – ವಿಧಿಯ ಟಿಪ್ಪಣದಾಯುಷವು ತೀರಿದಡೆ ಸಾವರು