ಅಳ್ಳೆದೆಯ ಮನ್ನೆಯರನೊಗ್ಗಿನ
ಡೊಳ್ಳುಗರ ಕಟವಾಯ ಕೊಯ್ ತಲೆ
ಗಳ್ಳರಿವದಿರು ತರಿಚುಗೆಡೆವರ ಹೋಗ ಹೇಳೆನುತ
ಬಿಲ್ಲಗೊಲೆಗೇರಿಸುತ ಚೌಪಟ
ಮಲ್ಲ ಹೊಕ್ಕನು ಭೀಮ ಭಟರ
ಲ್ಲಲ್ಲಿ ಕವಿದುದು ದ್ರುಪದ ನಕುಲ ಯುಧಿಷ್ಠಿರಾದಿಗಳು (ದ್ರೋಣ ಪರ್ವ, ೩ ಸಂಧಿ, ೨೦ ಪದ್ಯ)
ತಾತ್ಪರ್ಯ:
ಹೆದರುಪುಕ್ಕರಾದ ಸಾಮಮ್ತರ, ಹೊಟ್ಟೆ ಬೆಳೆಸಿದವರ, ಕಟವಾಯಿಗಳನ್ನು ಕೊಯ್ದುಹಾಕು, ಇವರು ತಲೆಗಳ್ಳರು, ತಲೆಯನ್ನುಳಿಸಿಕೊಳ್ಳಲು ಯುದ್ಧದಿಂದ ತಪ್ಪಿಸಿಕೊಳ್ಳಲು ಹವಣಿಸುವವರು, ಬಾಯಿಗೆ ಬಂದಮ್ತೆ ಕೂಗುವ ಇವರನ್ನು ಹೋಗಲು ಹೇಳು ಎನ್ನುತ್ತಾ ಭೀಮನು ಬಿಲ್ಲಿಗೆ ಹೆದೆಯೇರಿಸಿ ಯುದ್ಧಕ್ಕೆ ಬರಲು, ದ್ರುಪದ ನಕುಲ ಯುಧಿಷ್ಠಿರರೇ ಮೊದಲಾದವರೂ ಮುಂದೆ ಬಂದರು.
ಅರ್ಥ:
ಅಳ್ಳೆದೆ: ನಡುಗುವ ಎದೆ; ಮನ್ನೆಯ: ಮೌನ, ಗೌರವಕ್ಕೆ ಪಾತ್ರವಾದವ; ಒಗ್ಗು: ಗುಂಪು; ಡೊಳ್ಳು: ಹೊಟ್ಟೆ ಬೆಳಸಿದವ, ಚರ್ಮದ ವಾದ್ಯ, ಡೋಲು; ಕಟವಾಯಿ: ಬಾಯ ಕೊನೆ; ಕೊಯ್: ಸೀಳು; ತಲೆ: ಶಿರ; ಅರಿ: ಕತ್ತರಿಸು; ತರಚು: ಒರಟಾಗಿ ಕೀಳು, ಕೊಯ್ಯು, ತರಿ; ಕೆಡೆ: ಬೀಳು, ಕುಸಿ; ಹೋಗು: ತೆರಳು; ಹೇಳು: ತಿಳಿಸು; ಬಿಲ್ಲ: ಚಾಪ; ಚೌಪಟಮಲ್ಲ: ಪರಾಕ್ರಮ; ಹೊಕ್ಕು: ಸೇರು; ಭಟ: ಪರಾಕ್ರಮ, ಸೈನಿಕ; ಕವಿ: ಆವರಿಸು; ಆದಿ: ಮುಂತಾದ;
ಪದವಿಂಗಡಣೆ:
ಅಳ್ಳೆದೆಯ+ ಮನ್ನೆಯರನ್+ಒಗ್ಗಿನ
ಡೊಳ್ಳುಗರ +ಕಟವಾಯ +ಕೊಯ್ +ತಲೆ
ಗಳ್ಳರ್+ಇವದಿರು +ತರಿಚು+ಕೆಡೆವರ+ ಹೋಗ +ಹೇಳೆನುತ
ಬಿಲ್ಲಗೊಲೆಗ್+ಏರಿಸುತ +ಚೌಪಟ
ಮಲ್ಲ +ಹೊಕ್ಕನು +ಭೀಮ +ಭಟರ
ಲ್ಲಲ್ಲಿ+ ಕವಿದುದು +ದ್ರುಪದ +ನಕುಲ +ಯುಧಿಷ್ಠಿರಾದಿಗಳು
ಅಚ್ಚರಿ:
(೧) ಯುದ್ಧಕ್ಕೆ ಪ್ರಯೋಜನವಲ್ಲದವರು – ಅಳ್ಳೆದೆಯ, ಮನ್ನೆಯರ್, ಒಗ್ಗಿನ ಡೊಳ್ಳುಗರ, ಕಟವಾಯ