ಪದ್ಯ ೧: ದ್ರೋಣನು ಯಾರನ್ನು ಹುಡುಕುತ್ತಾ ಬಂದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕಡುಗೋಪದಲಿ ಕಳಶಜ
ನಾಳ ಮೇಳೈಸಿದನು ನಿಜಮೋಹರವ ಹಿಂದಿಕ್ಕಿ
ಕಾಳೆಗದೊಳನಿಲಜನನರಸುತ
ಲೋಲುಪತಿ ಮಿಗೆ ಬರುತ ಭೀಮನ
ಕೋಲ ಕೋಳಾಹಳವನೀಕ್ಷಿಸುತಲ್ಲಿಗೈ ತಂದ (ದ್ರೋಣ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ದ್ರೋಣನು ಕಡುಕೋಪದಿಂದ ಸೈನಿಕರನ್ನು ಸೇರಿಸಿ, ಅಗ್ರಭಾಗದಲ್ಲಿ ತಾನು ಹೊರಟು ಭೀಮನನ್ನು ಹುಡುಕುತ್ತಾ ಬರುತ್ತಿರಲು, ಭ್ಮನ ಕಾಳಗದ ಬಾಣಗಳ ಕೋಲಾಹಲವನ್ನು ಕೇಳಿ ತಾ

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ: ಪೋಷಿಸುವ; ಕಡು: ಬಹಳ, ತುಂಬ; ಕೋಪ: ಖತಿ; ಕಳಶಜ: ದ್ರೋಣ; ಆಳ: ಗಾಢತೆ; ಮೇಳೈಸು: ಸೇರು, ಜೊತೆಯಾಗು; ಮೋಹರ: ಯುದ್ಧ; ಹಿಂದೆ: ಹಿಂಭಾಗ; ಕಾಳೆಗ: ಯುದ್ಧ; ಅನಿಲಜ: ವಾಯು ಪುತ್ರ (ಭೀಮ); ಅರಸು: ಹುಡುಕು; ಮಿಗೆ: ಅಧಿಕ; ಬರುತ: ಆಗಮಿಸು; ಕೋಲು: ಬಾಣ; ಕೋಳಾಹಲ: ಗೊಂದಲ; ಈಕ್ಷಿಸು: ನೋಡು; ತಂದ: ಬಂದ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕಡು+ಕೋಪದಲಿ +ಕಳಶಜನ್
ಆಳ +ಮೇಳೈಸಿದನು +ನಿಜ+ಮೋಹರವ +ಹಿಂದಿಕ್ಕಿ
ಕಾಳೆಗದೊಳ್+ಅನಿಲಜನನ್+ಅರಸುತ
ಲೋಲುಪತಿ +ಮಿಗೆ +ಬರುತ +ಭೀಮನ
ಕೋಲ +ಕೋಳಾಹಳವನ್+ಈಕ್ಷಿಸುತ್+ಅಲ್ಲಿಗೈ +ತಂದ

ಅಚ್ಚರಿ:
(೧) ಕಳಶಜ, ಅನಿಲಜ – ದ್ರೋಣ ಭೀಮರನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ