ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೩೦ ಪದ್ಯ)
ತಾತ್ಪರ್ಯ:
ಎಲೈ ಅರ್ಜುನ, ಮೂದಲಿಸಲು ನಮನ್ನೇಕೆ ಆರಿಸಿದೆ, ನಾವಾದರೋ ವಯೋವೃದ್ಧರು, ನಮಗೆ ಬಿರುದು ಗಿರುದಿನ ಯಾವ ಆಸೇಯೂ ಇಲ್ಲ, ನೀವಾದರೋ ಯುವಕರು, ವೀರರು, ಯುದ್ಧದ ಭರಕ್ಕೆ ನೀವಿರುವಾಗ ನಿಮ್ಮ ಸೈನ್ಯ ನಾಯಕರಿಲ್ಲದಂತಾಗಲು ಹೇಗೆ ಸಾಧ್ಯ ಹೇಳು ಎಂದು ಭೀಷ್ಮರು ಹೇಳಿದರು.
ಅರ್ಥ:
ವೃದ್ಧ: ವಯಸ್ಸಾದ; ಬಿರುದು: ಗೌರವ ಸೂಚಕ ಪದ; ಲಾವಣಿ: ಜನಪದ ಹಾಡುಗಳ ಒಂದು ಪ್ರಕಾರ; ಜವ್ವನ: ಯೌವ್ವನ; ಭಂಟ: ವೀರ, ಪರಾಕ್ರಮಿ; ರಣ: ಯುದ್ಧಭೂಮಿ; ಧುರಭರ: ಜೋರಾದ ಯುದ್ಧ; ನಿರ್ನಾಯಕ: ನಿರ್ಣಯ ಮಾಡುವ, ನಿರ್ಧಾರ; ಸೇನಾವಳಿ: ಸೈನ್ಯ; ಮೂದಲೆ: ಹಂಗಿಸು; ಲಕ್ಷ್ಯ: ಗುರುತು;
ಪದವಿಂಗಡಣೆ:
ನಾವು +ವೃದ್ಧರು +ಬಿರುದು +ಗಿರುದಿನ
ಲಾವಣಿಗೆ +ನಮಗೇಕೆ +ಹೇಳೈ
ನೀವಲೈ +ಜವ್ವನದ +ಭಂಟರು +ರಣದ +ಧುರಭರಕೆ
ನೀವಿರಲು +ನಿರ್ನಾಯಕವೆ +ಸೇ
ನಾವಳಿ +ಮಹಾದೇವ +ಮೂದಲೆಗ್
ಆವು +ಲಕ್ಷ್ಯವೆ +ಹೇಳು +ಫಲುಗುಣ+ ಎಂದನಾ +ಭೀಷ್ಮ
ಅಚ್ಚರಿ:
(೧) ಆಡು ಪದದ ಬಳಕೆ – ಬಿರುದು ಗಿರುದು;