ನುಡಿಮುತ್ತುಗಳು: ಅರಣ್ಯ ಪರ್ವ ೧೪ ಸಂಧಿ

  • ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ – ಪದ್ಯ ೧
  • ದೃಗು ಸರಸಿರುಹವರಳಿದವು – ಪದ್ಯ ೨
  • ಕೊಪ್ಪಿನಲಿ ಸಿಂಜಿನಿಯ ಸಿಕ್ಕಿದನಳ್ಳಿರಿದು ಮಾರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ – ಪದ್ಯ ೩
  • ಘೋರತರ ಲಯಭೈರವನ ಹುಂಕಾರವೋ, ಸಂಹಾರ ಶೃತಿಯೋಂಕಾರವೋ ಕಲ್ಪಾಂತ ತಾಂಡವ ವೇದ ಪಂಡಿತನ ಆರುಭಟೆಯೋ, ವಿಕ್ರಮವೀರಪದಭಿನ್ನಾಬ್ಜಜಾಂಡಕಠೋರರವ – ಪದ್ಯ ೪
  • ಶಿಕ್ಷೆ ರಕ್ಷೆಗೆ ಬಾಣವೊಂದೇಲಕ್ಷ್ಯವಿದು; ನೀನರಿಯದುದಕೆ ವಿಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ – ಪದ್ಯ ೧೦
  • ದೇವಮುನಿ ಹಾಯಿದನು ಗಗನದಲಿ – ಪದ್ಯ ೧೨
  • ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ – ಪದ್ಯ ೧೭
  • ತೊಂಡು ಮೊಲನ ತೊಂಡಕು ನವಿಲಿನ ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ – ಪದ್ಯ ೧೮
  • ಗಗನವತುಡುಕುವಾಕುಳಿಕೆ – ಪದ್ಯ ೧೮
  • ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ – ಪದ್ಯ ೨೨
  • ತೆಬ್ಬಿದವು ಬೆಳ್ಳಾರವಲೆ ಹರಿದುಬ್ಬಿಹಾಯ್ದರೆ ವೇಡೆಯವರಿಗೆ ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು – ಪದ್ಯ ೨೬
  • ಮುಳುದೊಡಕಿನೊಳು ಕೂದಲೊಂದೇಸಿಲುಕಿನಿಂದವು ಚಮರಿಮೃಗ – ಪದ್ಯ ೨೮
  • ಪವನಜ ಹಿಡಿದು ಬೀಸಿದ ನಾನೆಗಳನವಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ – ಪದ್ಯ ೨೯
  • ಮುಡುಹು ಸೋಂಕಲಿಕುಲಿದು ಹೆಮ್ಮರನುಡಿದು ಬಿದ್ದವು ಪಾದಘಾತದೊಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ – ಪದ್ಯ ೩೧
  • ಮೈಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ – ಪದ್ಯ ೩೩
  • ಪುಟದ ಕಂತುಕದಂತೆ ಫಣಿ ಲಟಕಟಿಸಲೌಕಿತು ಮತ್ತೆ ಗಿಡಗನ ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ – ಪದ್ಯ ೩೪
  • ಹುದುಗಿದಗ್ಗದ ಸತ್ವದುತ್ಸಾಹದ ನಿರೂಢಶ್ವಾಸದಲಿ ಗದಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ – ಪದ್ಯ ೩೭
  • ವಿಕಟಮದನಾಗಾಯುತ ತ್ರಾಣಕನ ಸಾಹಸವಡಗಿತೇ – ಪದ್ಯ ೩೮
  • ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ – ಪದ್ಯ ೩೯
  • ಮೌಳಿತಲ್ಪದ ತಲೆಯ ಹೊಳಹಿನ ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ – ಪದ್ಯ ೪೨
  • ವಿಖ್ಯಾತರಿಗೆ ಪರಪೀಡೆ ಧರ್ಮವಿನಾಶಕರವೆಂದ – ಪದ್ಯ ೪೫
  • ಪಿತೃಮಾತೃ ವಂಶೋತ್ಕರವಿಶುದ್ಧಸದಾಗ್ನಿ ಹೋತ್ರಾ ಚರಿತವಾಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ ವರಗುಣಂಗಳಿವಾವನಲಿ ಗೋಚರಿಸಿತಾತನೆ ವಿಪ್ರನೆಂಬರು – ಪದ್ಯ ೪೯
  • ಸತ್ಯವುಳ್ಳನೆ ವಿಪ್ರನವನೆಂದ – ಪದ್ಯ ೫೧
  • ಲೋಕತ್ರಯವನೊಂದೇ ಸತ್ಯದಿಂದವೆ ಜಯಿಸಬಹುದಾ – ಪದ್ಯ ೫೧
  • ಸತ್ಯವುಳ್ಳರೆ ಶೂದ್ರ ದ್ವಿಜರಿಂದತ್ಯಧಿಕನಾದ್ವಿಜರೊಳಗೆ ವರಸತ್ಯಹೀನನೆ ಹೀನಜಾತಿಗನೆಂದನಾ ಭೂಪ – ಪದ್ಯ ೫೨
  • ನಾರಿಯರ ಕಡೆಗಣ್ಣ ಹೊಯ್ಲಿನಧಾರೆಗಳುಕದನಾವನಾತನೆಧೀರನಾತನೆ ದಿಟ್ಟ – ಪದ್ಯ ೫೪
  • ಕ್ಷಿತಿಗೆ ಲೋಭಿಯೆ ಕಷ್ಟನಾತ್ಮ ನಿರತನೆ ಮುಕ್ತನು ವೇದ ಮಾರ್ಗ ಚ್ಯುತನೆ ಲೋಕದ್ವಯಕೆ ದೂರನು – ಪದ್ಯ ೫೫
  • ಪರಸತಿಗೆ ಮನಮಿಸುಕದವನೇ ಶುಚಿ; ಪರಾರ್ಥವ್ಯಸನಿಯೇ ಸಜ್ಜನನು; ಪಿಸುಣನೇ ಹಗೆ; ಮಿತ್ರದ್ರೋಹಿಯೇ ವಿಷನು – ಪದ್ಯ ೫೭
  • ವಿನುತ ಪರತತ್ತ್ವಜ್ಞನತಿ ಸೇವ್ಯನು; ಸುದುರ್ಲಭನೇ ಜಿತೇಂದ್ರಿಯನು;ಅನುಗುಣನೆ ಸಖ; ಪರರ ಸೈರಿಸದವನೆ ದುಸ್ಸಹನು ಮನುಜರಲಿ; ದುರ್ಮತಿಯಲಾ ದುರ್ಜನರಿಗಾಶ್ರಯವೆಂದು – ಪದ್ಯ ೫೮
  • ವಿಪ್ರಾವಮಾನವೆ ಸಿರಿಗೆ ನಂಜುಕಣಾ – ಪದ್ಯ ೬೦
  • ಮೀಸಲಿನ ಮಾನಿನಿಯರಲಿ ಮನದಾಸೆ ಮನುಜರ ಮುರಿವುದಕೆ ತಾನೈಸಲೇ ದುಷ್ಟಾಂತವೆಂದನು ನಹುಷನರಸಂಗೆ – ಪದ್ಯ ೬೫
  • ವಿಟಬುದ್ಧಿ ಸಿರಿಗೆ ವಿರೋಧಿಯೈ – ಪದ್ಯ ೬೬
  • ಪರರುನ್ನತಿಯ ಬಯಸುವರು ಸಜ್ಜನ – ಪದ್ಯ ೭೦
  • ಅಪಾಯದ ಜಲಧಿಗಳು ಬತ್ತುವುವು ಯದುಕುಲ ತಿಲಕ ಗದುಗಿನ ವೀರನಾರಾಯಣನ ಕರುಣದಲಿ – ಪದ್ಯ ೭೧

ನಿಮ್ಮ ಟಿಪ್ಪಣಿ ಬರೆಯಿರಿ