- ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ – ಪದ್ಯ ೧
- ದೃಗು ಸರಸಿರುಹವರಳಿದವು – ಪದ್ಯ ೨
- ಕೊಪ್ಪಿನಲಿ ಸಿಂಜಿನಿಯ ಸಿಕ್ಕಿದನಳ್ಳಿರಿದು ಮಾರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ – ಪದ್ಯ ೩
- ಘೋರತರ ಲಯಭೈರವನ ಹುಂಕಾರವೋ, ಸಂಹಾರ ಶೃತಿಯೋಂಕಾರವೋ ಕಲ್ಪಾಂತ ತಾಂಡವ ವೇದ ಪಂಡಿತನ ಆರುಭಟೆಯೋ, ವಿಕ್ರಮವೀರಪದಭಿನ್ನಾಬ್ಜಜಾಂಡಕಠೋರರವ – ಪದ್ಯ ೪
- ಶಿಕ್ಷೆ ರಕ್ಷೆಗೆ ಬಾಣವೊಂದೇಲಕ್ಷ್ಯವಿದು; ನೀನರಿಯದುದಕೆ ವಿಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ – ಪದ್ಯ ೧೦
- ದೇವಮುನಿ ಹಾಯಿದನು ಗಗನದಲಿ – ಪದ್ಯ ೧೨
- ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ – ಪದ್ಯ ೧೭
- ತೊಂಡು ಮೊಲನ ತೊಂಡಕು ನವಿಲಿನ ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ – ಪದ್ಯ ೧೮
- ಗಗನವತುಡುಕುವಾಕುಳಿಕೆ – ಪದ್ಯ ೧೮
- ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ – ಪದ್ಯ ೨೨
- ತೆಬ್ಬಿದವು ಬೆಳ್ಳಾರವಲೆ ಹರಿದುಬ್ಬಿಹಾಯ್ದರೆ ವೇಡೆಯವರಿಗೆ ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು – ಪದ್ಯ ೨೬
- ಮುಳುದೊಡಕಿನೊಳು ಕೂದಲೊಂದೇಸಿಲುಕಿನಿಂದವು ಚಮರಿಮೃಗ – ಪದ್ಯ ೨೮
- ಪವನಜ ಹಿಡಿದು ಬೀಸಿದ ನಾನೆಗಳನವಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ – ಪದ್ಯ ೨೯
- ಮುಡುಹು ಸೋಂಕಲಿಕುಲಿದು ಹೆಮ್ಮರನುಡಿದು ಬಿದ್ದವು ಪಾದಘಾತದೊಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ – ಪದ್ಯ ೩೧
- ಮೈಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ – ಪದ್ಯ ೩೩
- ಪುಟದ ಕಂತುಕದಂತೆ ಫಣಿ ಲಟಕಟಿಸಲೌಕಿತು ಮತ್ತೆ ಗಿಡಗನ ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ – ಪದ್ಯ ೩೪
- ಹುದುಗಿದಗ್ಗದ ಸತ್ವದುತ್ಸಾಹದ ನಿರೂಢಶ್ವಾಸದಲಿ ಗದಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ – ಪದ್ಯ ೩೭
- ವಿಕಟಮದನಾಗಾಯುತ ತ್ರಾಣಕನ ಸಾಹಸವಡಗಿತೇ – ಪದ್ಯ ೩೮
- ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ – ಪದ್ಯ ೩೯
- ಮೌಳಿತಲ್ಪದ ತಲೆಯ ಹೊಳಹಿನ ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ – ಪದ್ಯ ೪೨
- ವಿಖ್ಯಾತರಿಗೆ ಪರಪೀಡೆ ಧರ್ಮವಿನಾಶಕರವೆಂದ – ಪದ್ಯ ೪೫
- ಪಿತೃಮಾತೃ ವಂಶೋತ್ಕರವಿಶುದ್ಧಸದಾಗ್ನಿ ಹೋತ್ರಾ ಚರಿತವಾಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ ವರಗುಣಂಗಳಿವಾವನಲಿ ಗೋಚರಿಸಿತಾತನೆ ವಿಪ್ರನೆಂಬರು – ಪದ್ಯ ೪೯
- ಸತ್ಯವುಳ್ಳನೆ ವಿಪ್ರನವನೆಂದ – ಪದ್ಯ ೫೧
- ಲೋಕತ್ರಯವನೊಂದೇ ಸತ್ಯದಿಂದವೆ ಜಯಿಸಬಹುದಾ – ಪದ್ಯ ೫೧
- ಸತ್ಯವುಳ್ಳರೆ ಶೂದ್ರ ದ್ವಿಜರಿಂದತ್ಯಧಿಕನಾದ್ವಿಜರೊಳಗೆ ವರಸತ್ಯಹೀನನೆ ಹೀನಜಾತಿಗನೆಂದನಾ ಭೂಪ – ಪದ್ಯ ೫೨
- ನಾರಿಯರ ಕಡೆಗಣ್ಣ ಹೊಯ್ಲಿನಧಾರೆಗಳುಕದನಾವನಾತನೆಧೀರನಾತನೆ ದಿಟ್ಟ – ಪದ್ಯ ೫೪
- ಕ್ಷಿತಿಗೆ ಲೋಭಿಯೆ ಕಷ್ಟನಾತ್ಮ ನಿರತನೆ ಮುಕ್ತನು ವೇದ ಮಾರ್ಗ ಚ್ಯುತನೆ ಲೋಕದ್ವಯಕೆ ದೂರನು – ಪದ್ಯ ೫೫
- ಪರಸತಿಗೆ ಮನಮಿಸುಕದವನೇ ಶುಚಿ; ಪರಾರ್ಥವ್ಯಸನಿಯೇ ಸಜ್ಜನನು; ಪಿಸುಣನೇ ಹಗೆ; ಮಿತ್ರದ್ರೋಹಿಯೇ ವಿಷನು – ಪದ್ಯ ೫೭
- ವಿನುತ ಪರತತ್ತ್ವಜ್ಞನತಿ ಸೇವ್ಯನು; ಸುದುರ್ಲಭನೇ ಜಿತೇಂದ್ರಿಯನು;ಅನುಗುಣನೆ ಸಖ; ಪರರ ಸೈರಿಸದವನೆ ದುಸ್ಸಹನು ಮನುಜರಲಿ; ದುರ್ಮತಿಯಲಾ ದುರ್ಜನರಿಗಾಶ್ರಯವೆಂದು – ಪದ್ಯ ೫೮
- ವಿಪ್ರಾವಮಾನವೆ ಸಿರಿಗೆ ನಂಜುಕಣಾ – ಪದ್ಯ ೬೦
- ಮೀಸಲಿನ ಮಾನಿನಿಯರಲಿ ಮನದಾಸೆ ಮನುಜರ ಮುರಿವುದಕೆ ತಾನೈಸಲೇ ದುಷ್ಟಾಂತವೆಂದನು ನಹುಷನರಸಂಗೆ – ಪದ್ಯ ೬೫
- ವಿಟಬುದ್ಧಿ ಸಿರಿಗೆ ವಿರೋಧಿಯೈ – ಪದ್ಯ ೬೬
- ಪರರುನ್ನತಿಯ ಬಯಸುವರು ಸಜ್ಜನ – ಪದ್ಯ ೭೦
- ಅಪಾಯದ ಜಲಧಿಗಳು ಬತ್ತುವುವು ಯದುಕುಲ ತಿಲಕ ಗದುಗಿನ ವೀರನಾರಾಯಣನ ಕರುಣದಲಿ – ಪದ್ಯ ೭೧