ಪದ್ಯ ೩೦: ಭೀಮನು ತನ್ನ ಸಂತಸವನ್ನು ಹೇಗೆ ವ್ಯಕ್ತಪಡಿಸಿದನು?

ತೀದುದೆಮಗೆ ವನಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದು ಹೋದುದು ಹರಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವು ನಮಗಾಯ್ತಲಾ ಚರಿತಾರ್ಥರಾವೆಂದ (ಅರಣ್ಯ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಮಗೆ ವನವಾಸದ ದುಃಖವು ತೀರಿತು, ಸಹಿಸಲಾಗದ ಅರ್ಜುನನ ಅಗಲಿಕೆಯ ವಿಷವೂ ಕಡಿಮೆಯಾಯಿತು, ರಾಜ್ಯವನ್ನು ಕಳೆದುಕೊಂಡ ಖೇದವು ಇಲ್ಲವಾಯಿತು, ನಿಮ್ಮ ದರ್ಶನದಿಂದ ನಾವು ಪಡೆಯಬೇಕಾದುದೆಲ್ಲವನ್ನೂ ಪಡೆದಂತಾಯಿತು ಎಂದು ಭೀಮನು ಹೇಳಿದನು.

ಅರ್ಥ:
ತೀದು: ತೀರಿತು; ವನ: ಕಾಡು; ಪ್ರವಾಸ: ಸಂಚಾರ; ಖೇದ; ದುಃಖ; ಅಗಲಿಕೆ: ಬೇರೆ ಹೋಗು, ತೊರೆ; ದುರ್ಭೇದ: ಒಡೆಯಲು ಕಷ್ಟವಾದ; ವಿಷ: ಗರಲ; ಇಳಿ: ಕಡಿಮೆಯಾಗು; ಹರ: ಶಿವ; ಮಹಾದೇವ: ಶಂಕರ; ರಾಜ್ಯಭ್ರಂಶ: ರಾಜ್ಯದ ಅಗಲಿಕೆ; ವಿಷಾದ: ದುಃಖ; ಬೀತು: ಕಳೆದುಹೋಯಿತು; ಕಾರುಣ್ಯ: ದಯೆ; ಚರಿತಾರ್ಥ: ಕೃತಾರ್ಥ, ಧನ್ಯ;

ಪದವಿಂಗಡಣೆ:
ತೀದುದ್+ಎಮಗೆ +ವನ+ಪ್ರವಾಸದ
ಖೇದವ್+ಅರ್ಜುನನ್+ಅಗಲಿಕೆಯ +ದು
ರ್ಭೇದ +ವಿಷವಿಂದ್+ಇಳಿದು +ಹೋದುದು +ಹರ+ಮಹಾದೇವ
ಹೋದ +ರಾಜ್ಯಭ್ರಂಶ +ಬಹಳ +ವಿ
ಷಾದ +ಬೀತುದು +ನಿಮ್ಮ +ಕಾರು
ಣ್ಯೋದಯವು +ನಮಗಾಯ್ತಲಾ +ಚರಿತಾರ್ಥರಾವೆಂದ

ಅಚ್ಚರಿ:
(೧) ಖೇದ, ವಿಷಾದ – ಸಾಮಾರ್ಥ ಪದ

ನಿಮ್ಮ ಟಿಪ್ಪಣಿ ಬರೆಯಿರಿ