ಪದ್ಯ ೧೨: ಸಮುದ್ರದ ನೀರನ್ನು ಯಾರು ಕುಡಿದರು?

ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರು ಮುನಿದೆಪ್ಪತ್ತನುಂಗಿದರೇನನುಸುರುವೆನು
ದಿವಿಜರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದರು ಸುರರು ದಾನವನ (ಅರಣ್ಯ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಚ್ಯವ ಮುನಿಗಳ ಆಶ್ರಮದಲ್ಲಿ ಮೂವರನ್ನು ಕೊಂದರು, ಭಾರದ್ವಾಜರ ಆಶ್ರಮದಲ್ಲಿ ಎಪ್ಪತ್ತು ಜನರನ್ನು ರಾಕ್ಷಸರು ಕೊಂದರು, ಇತ್ತ ದೇವತೆಗಳು ಅಗಸ್ತ್ಯರನ್ನು ಬೇಡಿ, ಒಪ್ಪಿಸಿ, ಅವರು ಸಮುದ್ರವನ್ನೆಲ್ಲಾ ಏಕಾಪೋಶನವನ್ನಾಗಿ ತನ್ನ ಜಠರದಲ್ಲಿಟ್ಟನು, ಆಗ ದೇವತೆಗಳು ರಾಕ್ಷಸರನ್ನು ಕೊಂದರು.

ಅರ್ಥ:
ಆಶ್ರಮ: ಕುಟೀರ; ತಿವಿ: ಚುಚ್ಚು; ಮುನಿ: ಋಷಿ; ನುಂಗು: ಕಬಳಿಸು; ಉಸುರು: ಹೇಳು, ಮಾತಾಡು; ದಿವಿಜ: ಬ್ರಾಹ್ಮಣ; ಪರುಠವಿಸು: ಸಿದ್ಧಗೊಳಿಸು; ಸಾಗರ: ಸಮುದ್ರ; ಹವಣಿಸು: ಪ್ರಯತ್ನಿಸು, ಹೊಂಚು, ಅಣಿಯಾಗು; ಜಠರ: ಹೊಟ್ಟೆ; ಕೊಂದು: ಸಾಯಿಸು; ಸುರ: ದೇವತೆ; ದಾನವ: ರಾಕ್ಷಸ;

ಪದವಿಂಗಡಣೆ:
ಚ್ಯವನನ+ಆಶ್ರಮದೊಳಗೆ+ ಮೂರನು
ತಿವಿದು +ಭಾರದ್ವಾಜನ+ಆಶ್ರಮಕ್
ಅವರು +ಮುನಿದ್+ಎಪ್ಪತ್ತ+ ನುಂಗಿದರ್+ಏನನ್+ಉಸುರುವೆನು
ದಿವಿಜರ್+ಇತ್ತಲ್+ಅಗಸ್ತ್ಯನನು +ಪರು
ಠವಿಸಿದರು +ಸಾಗರವನ್+ಆ+ ಮುನಿ
ಹವಣಿಸಿದ +ಜಠರದಲಿ +ಕೊಂದರು +ಸುರರು +ದಾನವನ

ಅಚ್ಚರಿ:
(೧) ಸಾಗರವನ್ನು ಕುಡಿದ ಪರಿ – ಅಗಸ್ತ್ಯನನು ಪರುಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ

ನಿಮ್ಮ ಟಿಪ್ಪಣಿ ಬರೆಯಿರಿ