ಪದ್ಯ ೫: ಧರ್ಮಜನು ಯಾರೊಂದಿಗೆ ತನ್ನ ದುಃಖದ ಸಂಗತಿಯನ್ನು ಹೇಳಿಕೊಂಡನು?

ವರಪುಲಸ್ತ್ಯ ಮುನೀಂದ್ರ ಭೀಷ್ಮಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲಂಗೆ
ಧರಣಿಪತಿ ಬೃಹದಶ್ವನನು ಸ
ತ್ಕರಿಸಿ ನಿಜರಾಜ್ಯಾಪಹಾರದ
ಪರಮ ದುಃಖ ಪರಂಪರೆಯನರುಹಿದನು ಖೇದದಲಿ (ಅರಣ್ಯ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಪುಲಸ್ತ್ಯ ಮುನಿಗಳು ಭೀಷ್ಮನಿಗೆ ತಿಳಿಸಿದ ಪುಷ್ಕರಾದಿ ತೀರ್ಥಗಳ ಮಹಿಮೆಯನ್ನು ಲೋಮಶನು ಧರ್ಮಜನಿಗೆ ತಿಳಿಸಿದನು. ಆಗ ಬೃಹದಶ್ವನೆಂಬ ಮಹರ್ಷಿಯು ಬರಲು ಧರ್ಮರಾಜನು ಅವನ್ನ್

ಅರ್ಥ:
ವರ: ಶ್ರೇಷ್ಠ; ಮುನೀಂದ್ರ: ಋಷಿವರ್ಯ; ಅರುಹು: ತಿಳಿಸು; ಉತ್ತಮ: ಶ್ರೇಷ್ಠ; ತೀರ್ಥ: ಪುಣ್ಯಕ್ಷೇತ್ರ; ವಿಸ್ತರ: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಮುನಿ: ಋಷಿ; ಅವನಿ: ಭೂಮಿ; ಅವನಿಪಾಲ: ರಾಜ; ಧರಣಿಪತಿ: ರಾಜ; ಸತ್ಕರಿಸು: ಗೌರವಿಸು; ರಾಜ್ಯ: ರಾಷ್ಟ್ರ,ದೇಶ; ಅಪಹಾರ: ಕಿತ್ತುಕೊಳ್ಳುವುದು; ಪರಮ: ಶ್ರೇಷ್ಠ; ದುಃಖ: ನೋವು, ದುಗುಡ; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು; ಖೇದ: ದುಃಖ;

ಪದವಿಂಗಡಣೆ:
ವರಪುಲಸ್ತ್ಯ +ಮುನೀಂದ್ರ +ಭೀಷ್ಮಂಗ್
ಅರುಹಿದ್+ಉತ್ತಮ +ತೀರ್ಥವನು+ ವಿ
ಸ್ತರಿಸಿದನು +ಲೋಮಶ +ಮುನೀಶ್ವರನ್+ಅವನಿಪಾಲಂಗೆ
ಧರಣಿಪತಿ +ಬೃಹದಶ್ವನನು +ಸ
ತ್ಕರಿಸಿ +ನಿಜ+ರಾಜ್ಯ+ಅಪಹಾರದ
ಪರಮ +ದುಃಖ +ಪರಂಪರೆಯನ್+ಅರುಹಿದನು +ಖೇದದಲಿ

ಅಚ್ಚರಿ:
(೧) ದುಃಖ, ಖೇದ; ವರ, ಉತ್ತಮ, ಪರಮ; ಮುನೀಂದ್ರ, ಮುನೀಶ್ವರ; ಧರಣಿಪತಿ, ಅವನಿಪಾಲ – ಸಮನಾರ್ಥಕ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ