ಪದ್ಯ ೮: ಊರ್ವಶಿಯು ಯಾರ ಅರಮನೆಗೆ ಬಂದಳು?

ತುರಗಮೇಧದ ರಾಜಸೂಯದ
ವರಮಹಾಕ್ರತುಕಾರರೀಕೆಯ
ಚರಣದುಂಗುಟ ತುದಿಯ ಕಾಂಬರೆ ಪೂತು ಫಲಗುಣನ
ಪರಮ ಪೂನ್ಯವದೇನು ತಾನಿ
ದ್ಮನೆಗೆ ಸತಿ ಬಂದಳೇನ
ಚ್ಚರಿಯೆನುತ ಹೊಗಳಿದರು ಮಾಗಧರಿಂದ್ರನಂದನನ (ಅರಣ್ಯ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ಅಶ್ವಮೇಧ, ರಾಜಸೂಯಾದಿ ಮಹಾಯಾಗಗಳನ್ನು ಮಾಡಿ ಸ್ವರ್ಗಕ್ಕೆ ಬಂದವರು, ಇವಳ ಪಾದದ ಬೆರಳುಗಳನ್ನೂ ಕಾಣರು, ಅರ್ಜುನನ ಪರಮಪುಣ್ಯವೇ ಸರಿ, ತಾನಿದ್ದ ಮನೆಗೇ ಊರ್ವಶಿಯು ಬಂದಳು ಏನಾಶ್ಚರ್ಯ, ಎಂದು ವಂದಿಮಾಗಧರು ಅರ್ಜುನನನ್ನು ಹೊಗಳಿದರು.

ಅರ್ಥ:
ತುರಗ: ಅಶ್ವ; ತುರಗಮೇಧ: ಅಶ್ವಮೇಧ; ವರ: ಶ್ರೇಷ್ಠ; ಮಹಾ: ದೊಡ್ಡ; ಕ್ರತು: ಯಾಗ, ಯಜ್ಞ; ಚರಣ: ಪಾದ; ಅಂಗುಟ: ಪಾದದ ಹೆಬ್ಬೆರಳು; ತುದಿ: ಅಗ್ರಭಾಗ; ಕಾಂಬರೆ: ಕಾಣು; ಪೂತು: ಭಲೇ; ಪುಣ್ಯ: ಸದಾಚಾರ; ಅರಮನೆ: ರಾಜನ ಆಲಯ; ಸತಿ: ಹೆಂಗಸು; ಅಚ್ಚರಿ: ಆಶ್ಚರ್ಯ; ಹೊಗಳು: ಸ್ತುತಿ, ಕೊಂಡಾಟ; ಮಾಗಧ: ಹೊಗಳುಭಟ್ಟ;

ಪದವಿಂಗಡಣೆ:
ತುರಗ+ಮೇಧದ +ರಾಜಸೂಯದ
ವರ+ಮಹಾಕ್ರತುಕಾರರ್+ಈಕೆಯ
ಚರಣದ್+ಉಂಗುಟ +ತುದಿಯ +ಕಾಂಬರೆ+ ಪೂತು +ಫಲಗುಣನ
ಪರಮ +ಪುಣ್ಯವದೇನು +ತಾನಿ
ದ್ದರಮನೆಗೆ +ಸತಿ+ ಬಂದಳ್+ಏನ್
ಅಚ್ಚರಿಯೆನುತ +ಹೊಗಳಿದರು +ಮಾಗಧರ್+ಇಂದ್ರನಂದನನ

ಅಚ್ಚರಿ:
(೧) ಊರ್ವಶಿಯ ನೋಡುವುದಿರಲಿ ಅವಳ ಅಂಗುಟವು ನೋಡಲು ಕಷ್ಟೆ ಎಂದು ಹೇಳುವ ಪರಿ – ತುರಗಮೇಧದ ರಾಜಸೂಯದ ವರಮಹಾಕ್ರತುಕಾರರೀಕೆಯ ಚರಣದುಂಗುಟ ತುದಿಯ ಕಾಂಬರೆ ಪೂತು ಫಲಗುಣನ
(೨) ಫಲಗುಣ, ಇಂದ್ರನಂದನ – ಅರ್ಜುನನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ