ರಾಮ ಕಿಂಪುರುಷಕ್ಕೆ ಭಾರತ
ಸೀಮೆಯಲಿ ನಾರಾಯಣನು ನರ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮಿಯು
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು (ಅರಣ್ಯ ಪರ್ವ, ೮ ಸಂಧಿ, ೪೮ ಪದ್ಯ)
ತಾತ್ಪರ್ಯ:
ಶ್ರೀರಾಮನು ಕಿಂಪುರುಷ ವರ್ಷಕ್ಕೆ ಪಾಲಕ, ಭರವರ್ಷಕ್ಕೆ ನರ, ನಾರಾಯನ, ಹನುಮಂತ, ಭೂದೇವಿ, ನಾರದ, ಮನು, ಸೂರ್ಯ, ಲಕ್ಷ್ಮೀದೇವಿ, ಪ್ರಹ್ಲಾದ, ಭದ್ರಶ್ರವ, ಸದಾಶಿವ ಇವರು ಪಾಲಕರು.
ಅರ್ಥ:
ಸೀಮೆ: ಎಲ್ಲೆ, ಗಡಿ; ವಸುಧ: ಭೂಮಿ; ಚಕ್ಷು: ಕಣ್ಣು; ನಿಸ್ಸೀಮ: ಎಲ್ಲೆಯಿಲ್ಲದುದು; ಪ್ರೇಮ: ಒಲವು;
ಪದವಿಂಗಡಣೆ:
ರಾಮ+ ಕಿಂಪುರುಷಕ್ಕೆ +ಭಾರತ
ಸೀಮೆಯಲಿ +ನಾರಾಯಣನು +ನರ
ನಾಮಧಾರಕ+ ಹನುಮ +ವಸುಧಾದೇವಿ+ ನಾರದನು
ಆ +ಮನು+ ಜಗ+ಚಕ್ಷು +ಲಕ್ಷ್ಮಿಯು
ಪ್ರೇಮದಿಂ +ಪ್ರಹ್ಲಾದ +ನಿಜ +ನಿ
ಸ್ಸೀಮ +ಭದ್ರಶ್ರವ +ಸದಾಶಿವನಿವರು +ಪಾಲಕರು
ಅಚ್ಚರಿ:
(೧) ಸೂರ್ಯನನ್ನು ಜಗಚ್ಚಕ್ಷು ಎಂದು ಕರೆದಿರುವುದು