ನುಡಿಮುತ್ತುಗಳು: ಸಭಾ ಪರ್ವ, ೧೪ ಸಂಧಿ

  • ಮರಳಲಹುದೈ ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆ ಯಾರಲಿ ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ – ಪದ್ಯ ೪
  • ಆ ನಗರದೊತ್ತೊತ್ತೆಗಳನಾ ಮಾನಿನಿಯರುಪ್ಪಾರತಿಯ ನವರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ – ಪದ್ಯ ೬
  • ಕುಲತಿಲಕ ಬಾ ಕಂದ ಭರತಾವಳಿ ವನದ ಮಾಕಂದ ಧರ್ಮಸ್ಥಳ ಲತಾವಳಿಕಂದ ಬಾಯೆಂದಪ್ಪಿದನು ನೃಪನ – ಪದ್ಯ ೮
  • ಚಿತ್ತದ ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ – ಪದ್ಯ ೯
  • ಚಂದಮಿಗೆ ಸಾವಿರದ ಸಂಖ್ಯೆಯಲಿಂದು ಮುಖಿಯರ ತಳಿಗೆಯಾರತಿ ಸಂದಣಿಸಿದವು – ಪದ್ಯ ೧೧
  • ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು – ಪದ್ಯ ೧೩
  • ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು – ಪದ್ಯ ೧೪
  • ವೊಂದೊಂದನೌಕಿದವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ – ಪದ್ಯ ೨೬
  • ಸೂಸಕಂಗಳ ಮುರಿದ ಮುತ್ತಿನ ದೇಶಿಕಾರಿಯರಾನನೇಂದುಗಳಾ ಸುಧಾಕರನೆನಲು – ಪದ್ಯ ೩೦
  • ಖೋಡಿಯಿಲ್ಲದ ಸರಸ ನೆತ್ತವನಾಡಲರಿಯದ ನೃಪತಿ ಮೃಗವೆಂದಾಡುತಿಹರರಿವವರು – ಪದ್ಯ ೩೪
  • ನೀವೇ ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು – ಪದ್ಯ ೩೫
  • ನಿಮ್ಮಲಿ ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ – ಪದ್ಯ ೩೬
  • ದ್ಯೂತ ದುರ್ವ್ಯಸನ ಪ್ರಪಂಚವಿದು – ಪದ್ಯ ೩೭
  • ದ್ಯೂತ ಮೃಗಯಾ ಸ್ತ್ರೀವ್ಯಸನನೃಪ ಜಾತಿಗೋಸುಗರಾದ ವಿದರರ ಸಾತಿಶಯವರಿಯದವ ನರಮೃಗವೆಂದನಾ ಶಕುನಿ – ಪದ್ಯ ೩೮
  • ಕಾಳಗಕೆ ಜೂಜಿಗೆ ಕರೆದೊಡೋಸರಿಸಿದೊಡೆ ಬಳಿಕವ ಗುರುವನೇ ಕ್ಷತ್ರಿಯರೊಳಗೆ – ಪದ್ಯ ೩೯
  • ಕಳವಿನ ಜೂಜು ಧರ್ಮದ ಮಗನೊ ಮೊಮ್ಮನೊ – ಪದ್ಯ ೪೦
  • ಧೀರನಲ್ಲಾ ಧರ್ಮಶಾಸ್ತ್ರ ವಿಚಾರ ಸಾರಜ್ಞಾನ ನಿಷ್ಠೆಯೊಳೋರೆಯುಂಟೇ ದ್ಯೂತಕೇಳಿಗೆ ಮಾಡಿದನು ಮನವ – ಪದ್ಯ ೪೧
  • ಗಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ – ಪದ್ಯ ೪೩
  • ಪರಿಭವದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ – ಪದ್ಯ ೪೪
  • ಮುಸುಡ ತಿರುಹಿತು ತಿಳಿವು ಲಜ್ಜೆಯ ದೆಸೆಗೆ ದುರ್ಘಟವಾಯ್ತು –ಪದ್ಯ ೪೪
  • ವ್ಯಸನ ತೃಷ್ಣೆಯು ಕೀಳು ಚಿತ್ತದ ಮಿಸುನಿಯೊಳು ಬೆರೆಸಿತು – ಪದ್ಯ ೪೪
  • ಸುಬುದ್ಧಿಯ ರಸವು ಹಾರಿತು ಹುದಿದ ರಾಗದೇಷ ವಹ್ನಿಯಲಿ – ಪದ್ಯ ೪೪
  • ಭೂಪತಿ ಕೆಲಕೆ ಸಿಲುಕಿದನವದಿರೊಡ್ಡಿದ ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ – ಪದ್ಯ ೪೫
  • ವಿಜಯ ಸಿರಿವಾಚಾಟರಿಗೆ ಮೆಚ್ಚುವಳೆ – ಪದ್ಯ ೪೫
  • ಸಾರಿ ಗ್ರಾಮವನು ಕೆದರಿದರು ದ್ಯೂತದ ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು – ಪದ್ಯ ೪೯
  • ಉಗಿವಸೆರೆಗಳ ಬಳಿದು ಹಾರದ ಬಿಗುಹುಗಳ ಬೀದಿಗಳ ತಳಿ ಸಾರಿಗಳ ಧಾಳಾ ಧೂಳಿ ಮಸಗಿತು – ಪದ್ಯ ೫೦
  • ಆಯತದ ಕೃತ್ರಿಮವಲೇ ಕೌರವರ ಸಂಕೇತ – ಪದ್ಯ ೫೧
  • ದೈವಾನುರಾಗದ ಕುಣಿಕೆ ಬೇರಹುದು – ಪದ್ಯ ೫೬
  • ಚತುರಂಬುನಿಧಿ ಮೇಖಲೆಯ ಉತ್ತರ ಕುರುನರೇಂದ್ರರ ಸೀಮೆ ಪರಿಯಂತ ನೆಲವಿದೆಮ್ಮದು – ಪದ್ಯ ೫೯
  • ದಾಯ ಕಂದೆರೆವರೆ ಸುಯೋಧನರಾಯನುಪಚಿತ ಪುಣ್ಯ – ಪದ್ಯ ೬೫
  • ಸೋಲವ ಬಿತ್ತಿ ಬೆಳೆದನುಪದ್ಯ ೬೬
  • ಮರಿಗುದುರೆ ಮರಿಯಾನೆಗಳನುಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪಪದ್ಯ ೬೭
  • ಸೋಲವಿದು ಕಾಲಾಂತಕನ ಮೈಸಾಲ ಸಾರಿದೆನಕಟ – ಪದ್ಯ ೭೦
  • ವಿಷದ ಮಧುರವು ಕೊಲುವುದೋ ಮನ್ನಿಸುವುದೋ – ಪದ್ಯ ೭೧
  • ಕುಂತೀ ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ – ಪದ್ಯ ೭೪
  • ಐಹಿಕಾಮುಷ್ಮಿಕದ ವಿಭವೋತ್ಸಾಹ ನಿಸ್ಪೃಹರಾವಲೇ ಸಂದೇಹವೇ ನೀವರಿಪಿರೆಂದನು ತೂಗಿ ತುದಿವೆರಳ – ಪದ್ಯ ೭೫
  • ನೀಪರಮತತ್ವಜ್ಞಾನಿಯೇ ಕಾತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ – ಪದ್ಯ ೭೬
  • ಅವನಿಪತಿ ನಿಜಹುಬ್ಬಿನಲಿ ಹೂಳಿದನು ಪರಿಚರರ – ಪದ್ಯ ೭೭

ನಿಮ್ಮ ಟಿಪ್ಪಣಿ ಬರೆಯಿರಿ