ನುಡಿಮುತ್ತುಗಳು: ಸಭಾ ಪರ್ವ, ೧೦ ಸಂಧಿ

  • ಅರಿವತೆರದಿಂದೆನ್ನ ಮತಿಗೋಚರಿಸಿದುದ ಹೇಳುವೆನು ಕೃಷ್ಣನ ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ – ಪದ್ಯ ೨
  • ಹೊಳೆವುದಳಿವುದು ವಿಶ್ವವೀತನಸುಳಿವು ತೋರುವುದಿಲ್ಲ ಮಾಯಾಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ – ಪದ್ಯ ೫
  • ಆತುರಿಯನಾತುರಿಯ ತುರಿಯಾತೀತ ಲಕ್ಷಣ ನಿತ್ಯ ನಿರ್ಮಳ ನೀತನಮಳ ವ್ಯಕ್ತಿ ಚಿನ್ಮಯನೆಂದನಾ ಭೀಷ್ಮ – ಪದ್ಯ ೬
  • ಕರ್ಮವಿರಾಮದಲಿ ಕುದಿದವರು ಮಾಯಾಕಾಮಿನಿಯ ಕೈಮಸಕದಲಿ ಮರುಳಾಗದಿರರೆಂದ – ಪದ್ಯ ೭
  • ಇರದೆ ತಿಲದಲಿ ತೈಲ ಕಾಷ್ಠದೊಳೆರವ ತಹರೇ ಹುತವಹನ – ಪದ್ಯ ೮
  • ಹೂಹೆಗಳು ಹೊಯ್ದಾಡವೇ ನಿರ್ವಾಹ ಸೂತ್ರದ ಕುಣಿಕೆಗಾರನ ಗಾಹಿನಲಿ – ಪದ್ಯ ೯
  • ಭೀತನೊಬ್ಬನು ಕನಸಿನಲಿ ತನ್ನಾತಲೆಯ ತಾನರಿದು ಪಿಡಿದುದನೇತರಿಂದಲಿ ಕಂಡನೈ – ಪದ್ಯ ೧೦
  • ಕುಮತಿ ಕಪಿಗೇಕಮಲ ಮಾಣಿಕ – ಪದ್ಯ ೧೧
  • ಭ್ರಮೆಯ ಭುಜಗನೆ ರಜ್ಜುವೋ ಜಂಗಮವೊ – ಪದ್ಯ ೧೧
  • ತೋರುವೀ ತೋರಿಕೆಯ ತುಷವನು ತೂರಿದರೆ – ಪದ್ಯ ೧೨
  • ನೆಳಲು ಜಲದಲಿ ನಡುಗಲಿನ ಮಂಡಲಕೆ ಕಂಪವೆ, ಧೂಮಶಿಖಿ ಕುಪ್ಪಳಿಸಿದರೆ ಕಂದುವದೆ ನಭ, ಕೆಂಧೂಳಿಯೊಡೆ ಮುರಿದು ಸುಳಿದರನಿಲನ ತೊಳೆವರೇ – ಪದ್ಯ ೧೪
  • ಕೊಲೆಯ ಕವತೆಯ ಕನಸಿನಲಿ ಕಳವಳಿಸಿದರೆ ದಿಟವೇ – ಪದ್ಯ ೧೬
  • ಮಹತ್ವದೊಳುರು ಮಹತ್ವದಲಿ ಎಸೆವನಣುವಿಂಗಣುವೆನಿ – ಪದ್ಯ ೨೦
  • ದೇವನ ರೋಮಕೂಪದೊಳಗಣಿತಾಮರ ನಿಕರವಿಹುದಿದನರಿವರಾರೆಂದ – ಪದ್ಯ ೨೩
  • ಪಾವನಕೆ ಪಾವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯು – ಪದ್ಯ ೨೬
  • ಏಕೆ ಕನ್ನಡಿ ಕುರುಡರಿಗೆ, ಏಕೆ ಸಾಳಗ ಶುದ್ಧ ಬಧಿರರಿಗೆ, ಏಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ, ಏಕೆ ಖಳರಿಗೆ ನಯವಿಧಾನ ವ್ಯಾಕರಣ ಪಾಂಡಿತ್ಯ – ಪದ್ಯ ೩೬
  • ತಮನೆಂಬಸುರನನು ಕರಘಾತಿಯಿಂದವೆ ಕೆಡಹಿ ವೇದವನೀತ ತಂದನು ಮತ್ಸರೂಪಿನೊಳೆಂದನಾ ಭೀಷ್ಮ – ಪದ್ಯ ೩೮
  • ಹೇಳಲಜ ರುದ್ರಾಮರೇಂದ್ರರ ತಾಳಿಗೆಗಳೊಣಗಿದವು – ಪದ್ಯ ೪೧
  • ಆದುದಾವಿರ್ಭಾವ ಸಿಡಿಲಿನಸೋದರದ ಕಣ್ಣುಗಳ ಭಾಳದಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ – ಪದ್ಯ ೪೩
  • ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ ನೆಗೆಯಲುರಿ ಡೆದಬುಜಜಾಂಡದ ಬಗರಗೆಯ ಭೇದಿಸಿತು – ಪದ್ಯ ೪೪
  • ಗೋವಿಂದನಾರೆಂದರಿಯೆಲಾ ಹರಿಯೊಡನೆ ಜಂಬುಕ ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ ಪದ್ಯ ೪
  • ಬಾಯಿಬಡುಕರು ಬಗುಳಿದರೆ ಹರಿಯಾಯತಿಕೆ ಪಾಸಟಿಯೆ ನಿಗಮದ ಬಾಯ ಬೀಯಗವೀ ಮುಕುಂದನನರಿವರಾರೆಂದ – ಪದ್ಯ ೪೭
  • ಹುಲುಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ – ಪದ್ಯ ೪೯
  • ಹರಗಿರಿಯನೊಡಯೆತ್ತಿದುಬ್ಬಟೆಯರಸಲಾ ದಶವದನನಾತನ ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ – ಪದ್ಯ ೫೧
  • ಕೆಣಕಿದನು ದಾನವನನಾಗಳೆ ಹಣಿದವನ ಹೊಯ್ದಮಳ ಚಕ್ರದ ಗೊಣೆಯದಲಿ ಮೆರೆಸಿದನು ತಲೆಯನು ದಿವಿಜನಗರಿಯಲಿ – ಪದ್ಯ ೫೪
  • ಕರುಗಾದವನ ಕೈಯಿಂದ ಮಡಿದುದು ಕಂಸ ಪರಿವಾರ – ಪದ್ಯ ೫೬
  • ದಿವಿಜರಾಯನಲಾಯದಲಿ ಲಂಬಿಸಿದರಾ – ಪದ್ಯ ೬೧
  • ಇಂಗಿತಲರಿವುದು ಮಹಾತ್ಮರಿಗಂಗವಿದು; ಮಧ್ಯಮರು ಕರ್ಣಪ ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು; ಕಂಗಳಲಿ ಕಂಡರಿವರಧಮರು – ಪದ್ಯ ೬೨
  • ಬೆಳದಿಂಗಳು ವಿಯೋಗಿಗೆ ವಿಷಮವೆಂದನು – ಪದ್ಯ ೬೩

ನಿಮ್ಮ ಟಿಪ್ಪಣಿ ಬರೆಯಿರಿ