ಪದ್ಯ ೩೨: ಯಕ್ಷಕಿಂಪುರಷರು ಅರ್ಜುನನ ಜೊತೆ ಯುದ್ಧಮಾಡಿದರೆ?

ಅದು ಗಣನೆಗೊಂಬತ್ತು ಸಾವಿರ
ವರದೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆ+ಗಾನಲೇನ
ಪ್ಪುದು +ತದೀಯ +ಜನಂಗಳ್+ಇತ್ತುದು
ಸುದತಿಯರನಾಮಂಡಲಕೆ+ ಮೀಟಾದ +ವಸ್ತುಗಳ (ಸಭಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹಿಮಾಲಯದ ಬೆಟ್ಟಗಳನ್ನು ತನ್ನ ವಶಕ್ಕೆ ತೆಗೆದುಕೊಂಡಮೇಲೆ, ಅರ್ಜುನನು ತನ್ನ ಸೈನ್ಯವನ್ನು ಕಿಂಪುರುಷರಿದ್ದ ಪ್ರದೇಶಕ್ಕೆ ಬಂದನು, ಅದು ಒಂಬತ್ತು ಸಾವಿರ ಯೋಜನದ ವಿಸ್ತಾರವುಳ್ಳ ಪ್ರದೇಶ. ಅಲ್ಲಿ ಯಕ್ಷಕಿನ್ನರ ಕಿಂಪುರುಷರಿದ್ದರು, ಅವರು ಸುಖವಾಗಿ, ಅತಿಶಯರಾಗದಿಂದ ಜೀವಿಸಿದವರು. ಈ ಸೈನ್ಯವನ್ನು ಎದುರಿಸದೆ ಅವರು ತಮ್ಮಲ್ಲಿದ್ದ ಉತ್ತಮ ವಸ್ತುಗಳನ್ನು ಕೊಟ್ಟರು.

ಅರ್ಥ:
ಗಣನೆ: ಎಣಿಕೆ; ಸಾವಿರ: ಸಹಸ್ರ; ಸುದತಿ: ಸುಂದರಿ, ಸುಂದರವಾದ ಹಲ್ಲುಗಳನ್ನುಳ್ಳವಳು; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ಅತಿ: ಹೆಚ್ಚು; ಸುಖ: ಸಂತೋಷ; ಮೀಟು: ಶ್ರೇಷ್ಠ; ತದೀಯ: ಅದಕ್ಕೆ ಸಂಬಂಧಪಟ್ಟ; ಜನ: ಗುಂಪು; ಇತ್ತು: ಕೊಡು; ಫಲ್ಲಣೆ: ಘಲ್ ಘಲ್ ಶಬ್ದ; ವಸ್ತು: ಸಾಮಾನು, ಸಾಮಗ್ರಿ; ಮಂಡಲ: ನಾಡಿನ ಒಂದು ಭಾಗ;

ಪದವಿಂಗಡಣೆ:
ಅದು +ಗಣನೆಗ್+ಒಂಬತ್ತು +ಸಾವಿರವ್
ಅರದೊಳ್+ಇದ್ದುದು +ಯಕ್ಷ+ಕಿನ್ನರ
ಸುದತಿಯರು +ಕಿಂಪುರುಷರ್+ಅತಿರಾಗಿಗಳು+ ಸುಖಮಯರು
ಇದರ+ ಫಲ್ಲಣೆಗಾನಲೇನ
ಪ್ಪುದು ತದೀಯ ಜನಂಗಳಿತ್ತುದು
ಸುದತಿಯರನಾಮಂಡಲಕೆ ಮೀಟಾದ ವಸ್ತುಗಳ

ಅಚ್ಚರಿ:
(೧) ಸುದತಿ – ೩, ೬ ಸಾಲಿನ ಮೊದಲ ಪದ
(೨) ಅದು ಇದರ – ೧, ೪ ಸಾಲಿನ ಮೊದಲ ಪದ, (ಅದು, ಇದು ಎಂದು ಹೇಳುವ ಪದಗಳು)

ನಿಮ್ಮ ಟಿಪ್ಪಣಿ ಬರೆಯಿರಿ